July 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಯಂತ್ರೋಪಕರಣ ಅವಲಂಬಿತ ಕೃಷಿಕನಿಗೆ ತೊಂದರೆ ನೀಡಬೇಡಿ: ಮೋಹನ್ ಗೌಡ ಕಲ್ಮoಜ

ಬೆಳ್ತಂಗಡಿ: ಸರಕಾರ ನೂತನವಾಗಿ ಆದೇಶ ಮಾಡಿರುವ ಕೃಷಿಕನಿಗೆ ಅವಶ್ಯಕತೆಯಿರುವ ಮಿಷನ್ಗಳಿಗೆ ಪೆಟ್ರೋಲ್, ಡಿಸೇಲ್ ಸ್ಟಾಕ್ ಇಟ್ಟುಕೊಳ್ಳಲು ನಿರ್ಬಂಧ ನಿಷೇದ ಕಾನೂನು ಇದು ಖಂಡಿತ ಖಂಡನೀಯ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಗೌಡ ಕಲ್ಮoಜ ಸರಕಾರ ನಿರ್ಧಾರವನ್ನು ಖಂಡಿಸಿ ಈ ಕಾನೂನು ತೆರವುಗೊಳಿಸಿ ರೈತರ ಹಿತ ಅಗತ್ಯವಾಗಿ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ.

ಒಂದು ಕಡೆಯಿಂದ ಬೆಲೆ ಏರಿಕೆಯಿಂದ ಜನ ಜೀವನ ತತ್ತರಿಸಿ ಹೋಗಿದೆ. ರೈತರ ಅಡಿಕೆ ಕೃಷಿ ಅವಶ್ಯಕತೆಯಿರುವ ಮೈಲುತುತ್ತು ರಾಸಾಯನಿಕ ಗೊಬ್ಬರ ಬೆಲೆ ಗಗನ ಮುಟ್ಟಿದೆ. ಅಡಿಕೆ ಬೆಲೆ ಏರಿಕೆ ಆಗದೆ ಸ್ಥಿರ ನಿಂತಿದೆ. ಈ ಮದ್ಯೆ ರೈತರು ಇರುವ ತೋಟಗಳ ಉಳಿಸಲು ಹಿಂಗಾರಕ್ಕೆ ಔಷಧಿ ಸಿಂಪಡನೇ, ಕಳೆ ಕೀಳಲು, ಮಿಷನ್ ಬಳಕೆಗೆ ಪೆಟ್ರೋಲ್ ಕನಿಷ್ಠ 10 ಲೀಟರ್ ವರೆಗೆ ಅಗತ್ಯ ಇರುತ್ತದೆ. ಒಂದು ಲೀಟರ್ಗೋಸ್ಕರ ಪಂಪ್ ಗೆ ಹೋಗಲು ಪದೇ ಪದೇ ಸಾಧ್ಯ ಇಲ್ಲ.ನಮ್ಮಂತವರ ಸಣ್ಣ ಉತ್ಸಾಹಿ ಕೃಷಿಕರ ಬಗ್ಗೆ ಸರಕಾರಗಳು ಪ್ರೋತ್ಸಾಹ ಮಾಡಿದಾಗ ಮಾತ್ರ ನಿಜವಾದ ಆತ್ಮ ನಿರ್ಭರ ಭಾರತ ಮೂಡಿಬರಲು ಸಾಧ್ಯ.ಇಲ್ಲದಿದ್ದರೆ ರೈತರ ತೋಟಗಳು ಸರಕಾರದ ಈ ಕಾನೂನುಗಳಿಂದ ಹಾನಿಯಾದರೆ ಯಾರೂ ಕೂಡ ನಷ್ಟ ನೀಡುದಿಲ್ಲ. ಹಾಗಾಗಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಈ ಬಗ್ಗೆ ಗಮನ ಹರಿಸಬೇಕು ಎಂದವರು ಒತ್ತಾಯಿಸಿದ್ದಾರೆ.

Related posts

ಭಾರೀ ಮಳೆ ; ಮೈದುಂಬಿ ಹರಿಯುತ್ತಿರುವ ಕಪಿಲ ನದಿ: ಶಿಶಿಲೇಶ್ವರ ದೇವಸ್ಥಾನ ಹೊರಂಗಣ ಜಲಾವೃತ

Suddi Udaya

ಬಿಲ್ಡ‌ರ್ ಜಿತೇಂದ್ರ ಕೊಟ್ಟಾರಿಯವರ ಮನೆಗೆ ನುಗ್ಗಿ ಹಲ್ಲೆಗೆ ಯತ್ನ: ಎನ್.ಎಸ್.ಯು.ಐ ಕಾರ್ಯಕರ್ತ ಉಜಿರೆ ನಿವಾಸಿ ತನುಷ್ ಶೆಟ್ಟಿ ಮತ್ತು ಕದ್ರಿ ನಿವಾಸಿ ಅಂಕಿತ್ ಶೆಟ್ಟಿ ಬಂಧನ

Suddi Udaya

ಜಿಲ್ಲೆಯ ಹಾಸ್ಟೇಲ್‌ಗಳ ಸ್ಥಿತಿಗಳ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಸದಸ್ಯ ಪ್ರತಾಪಸಿಂಹ ನಾಯಕ್‌ ಪ್ರಶ್ನೆ

Suddi Udaya

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ‌ ವಿದ್ಯಾರ್ಥಿಗಳಿಂದ ಅದ್ವಿತೀಯ ಸಾಧನೆ

Suddi Udaya

ನೂತನವಾಗಿ ನಿರ್ಮಾಣಗೊಂಡ ಸುಸಜ್ಜಿತ ಪ್ರೌಢಶಾಲಾ ಕಟ್ಟಡ “ಸಿಂದೂರ”ಲೋಕಾರ್ಪಣೆ

Suddi Udaya

ಲಾಯಿಲ : ಶತಾಯುಷಿ ತುಂಗಮ್ಮ ಪೂಜಾರಿ ನಿಧನ

Suddi Udaya
error: Content is protected !!