24.7 C
ಪುತ್ತೂರು, ಬೆಳ್ತಂಗಡಿ
August 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಯಂತ್ರೋಪಕರಣ ಅವಲಂಬಿತ ಕೃಷಿಕನಿಗೆ ತೊಂದರೆ ನೀಡಬೇಡಿ: ಮೋಹನ್ ಗೌಡ ಕಲ್ಮoಜ

ಬೆಳ್ತಂಗಡಿ: ಸರಕಾರ ನೂತನವಾಗಿ ಆದೇಶ ಮಾಡಿರುವ ಕೃಷಿಕನಿಗೆ ಅವಶ್ಯಕತೆಯಿರುವ ಮಿಷನ್ಗಳಿಗೆ ಪೆಟ್ರೋಲ್, ಡಿಸೇಲ್ ಸ್ಟಾಕ್ ಇಟ್ಟುಕೊಳ್ಳಲು ನಿರ್ಬಂಧ ನಿಷೇದ ಕಾನೂನು ಇದು ಖಂಡಿತ ಖಂಡನೀಯ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಗೌಡ ಕಲ್ಮoಜ ಸರಕಾರ ನಿರ್ಧಾರವನ್ನು ಖಂಡಿಸಿ ಈ ಕಾನೂನು ತೆರವುಗೊಳಿಸಿ ರೈತರ ಹಿತ ಅಗತ್ಯವಾಗಿ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ.

ಒಂದು ಕಡೆಯಿಂದ ಬೆಲೆ ಏರಿಕೆಯಿಂದ ಜನ ಜೀವನ ತತ್ತರಿಸಿ ಹೋಗಿದೆ. ರೈತರ ಅಡಿಕೆ ಕೃಷಿ ಅವಶ್ಯಕತೆಯಿರುವ ಮೈಲುತುತ್ತು ರಾಸಾಯನಿಕ ಗೊಬ್ಬರ ಬೆಲೆ ಗಗನ ಮುಟ್ಟಿದೆ. ಅಡಿಕೆ ಬೆಲೆ ಏರಿಕೆ ಆಗದೆ ಸ್ಥಿರ ನಿಂತಿದೆ. ಈ ಮದ್ಯೆ ರೈತರು ಇರುವ ತೋಟಗಳ ಉಳಿಸಲು ಹಿಂಗಾರಕ್ಕೆ ಔಷಧಿ ಸಿಂಪಡನೇ, ಕಳೆ ಕೀಳಲು, ಮಿಷನ್ ಬಳಕೆಗೆ ಪೆಟ್ರೋಲ್ ಕನಿಷ್ಠ 10 ಲೀಟರ್ ವರೆಗೆ ಅಗತ್ಯ ಇರುತ್ತದೆ. ಒಂದು ಲೀಟರ್ಗೋಸ್ಕರ ಪಂಪ್ ಗೆ ಹೋಗಲು ಪದೇ ಪದೇ ಸಾಧ್ಯ ಇಲ್ಲ.ನಮ್ಮಂತವರ ಸಣ್ಣ ಉತ್ಸಾಹಿ ಕೃಷಿಕರ ಬಗ್ಗೆ ಸರಕಾರಗಳು ಪ್ರೋತ್ಸಾಹ ಮಾಡಿದಾಗ ಮಾತ್ರ ನಿಜವಾದ ಆತ್ಮ ನಿರ್ಭರ ಭಾರತ ಮೂಡಿಬರಲು ಸಾಧ್ಯ.ಇಲ್ಲದಿದ್ದರೆ ರೈತರ ತೋಟಗಳು ಸರಕಾರದ ಈ ಕಾನೂನುಗಳಿಂದ ಹಾನಿಯಾದರೆ ಯಾರೂ ಕೂಡ ನಷ್ಟ ನೀಡುದಿಲ್ಲ. ಹಾಗಾಗಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಈ ಬಗ್ಗೆ ಗಮನ ಹರಿಸಬೇಕು ಎಂದವರು ಒತ್ತಾಯಿಸಿದ್ದಾರೆ.

Related posts

ಪೆರಾಲ್ದರಕಟ್ಟೆ ಬದ್ರೀಯಾ ಜುಮಾ ಮಸೀದಿಯಲ್ಲಿ ಈದುಲ್ ಅದಾ ಸಾಮೂಹಿಕ ಪ್ರಾರ್ಥನೆ

Suddi Udaya

ಜಾರಿಗೆಬೈಲು ಬದ್ರಿಯಾ ಹಿದಾಯತುಲ್ ಇಸ್ಲಾಂ ಮದರಸ ಸಮಿತಿ ಹಾಗೂ ಗಲ್ಫ್ ಸಮಿತಿ ನೇತೃತ್ವದಲ್ಲಿ; ಜ. 7 : ಪರಿಮ ಜಾರಿಗೆ ಬೈಲಿನಲ್ಲಿ ಏಕದಿನ ಮತ ಪ್ರಭಾಷಣ – ಸನ್ಮಾನ ಕಾರ್ಯಕ್ರಮ

Suddi Udaya

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪುರಸ್ಕಾರ ಪರೀಕ್ಷೆ: ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯ ವಿದ್ಯಾರ್ಥಿಗಳಾದ ಜೈದೀಪ್ ಗೌಡ ಹಾಗೂ ರಕ್ಷಣ್ ಶೆಟ್ಟಿ ತೇರ್ಗಡೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ನಡ/ ಕನ್ಯಾಡಿ ಗ್ರಾಮ ಸಮಿತಿ ಮಹಿಳಾ ವೇದಿಕೆ ವತಿಯಿಂದ ಒಂಬತ್ತನೇ ವರ್ಷದ ಆಟಿಡೊಂಜಿ ಕೂಟ ಕಾರ್ಯಕ್ರಮ

Suddi Udaya

ಮಚ್ಚಿನ: ರುದ್ರಭೂಮಿ ಸಮಿತಿ ಹಾಗೂ ಎಬಿಸಿ ಒಕ್ಕೂಟದಿಂದ ಡಾ.ಡಿ. ಹೆಗ್ಗಡೆಯವರನ್ನು ಭೇಟಿ:

Suddi Udaya
error: Content is protected !!