26.1 C
ಪುತ್ತೂರು, ಬೆಳ್ತಂಗಡಿ
May 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಯಂತ್ರೋಪಕರಣ ಅವಲಂಬಿತ ಕೃಷಿಕನಿಗೆ ತೊಂದರೆ ನೀಡಬೇಡಿ: ಮೋಹನ್ ಗೌಡ ಕಲ್ಮoಜ

ಬೆಳ್ತಂಗಡಿ: ಸರಕಾರ ನೂತನವಾಗಿ ಆದೇಶ ಮಾಡಿರುವ ಕೃಷಿಕನಿಗೆ ಅವಶ್ಯಕತೆಯಿರುವ ಮಿಷನ್ಗಳಿಗೆ ಪೆಟ್ರೋಲ್, ಡಿಸೇಲ್ ಸ್ಟಾಕ್ ಇಟ್ಟುಕೊಳ್ಳಲು ನಿರ್ಬಂಧ ನಿಷೇದ ಕಾನೂನು ಇದು ಖಂಡಿತ ಖಂಡನೀಯ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಗೌಡ ಕಲ್ಮoಜ ಸರಕಾರ ನಿರ್ಧಾರವನ್ನು ಖಂಡಿಸಿ ಈ ಕಾನೂನು ತೆರವುಗೊಳಿಸಿ ರೈತರ ಹಿತ ಅಗತ್ಯವಾಗಿ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ.

ಒಂದು ಕಡೆಯಿಂದ ಬೆಲೆ ಏರಿಕೆಯಿಂದ ಜನ ಜೀವನ ತತ್ತರಿಸಿ ಹೋಗಿದೆ. ರೈತರ ಅಡಿಕೆ ಕೃಷಿ ಅವಶ್ಯಕತೆಯಿರುವ ಮೈಲುತುತ್ತು ರಾಸಾಯನಿಕ ಗೊಬ್ಬರ ಬೆಲೆ ಗಗನ ಮುಟ್ಟಿದೆ. ಅಡಿಕೆ ಬೆಲೆ ಏರಿಕೆ ಆಗದೆ ಸ್ಥಿರ ನಿಂತಿದೆ. ಈ ಮದ್ಯೆ ರೈತರು ಇರುವ ತೋಟಗಳ ಉಳಿಸಲು ಹಿಂಗಾರಕ್ಕೆ ಔಷಧಿ ಸಿಂಪಡನೇ, ಕಳೆ ಕೀಳಲು, ಮಿಷನ್ ಬಳಕೆಗೆ ಪೆಟ್ರೋಲ್ ಕನಿಷ್ಠ 10 ಲೀಟರ್ ವರೆಗೆ ಅಗತ್ಯ ಇರುತ್ತದೆ. ಒಂದು ಲೀಟರ್ಗೋಸ್ಕರ ಪಂಪ್ ಗೆ ಹೋಗಲು ಪದೇ ಪದೇ ಸಾಧ್ಯ ಇಲ್ಲ.ನಮ್ಮಂತವರ ಸಣ್ಣ ಉತ್ಸಾಹಿ ಕೃಷಿಕರ ಬಗ್ಗೆ ಸರಕಾರಗಳು ಪ್ರೋತ್ಸಾಹ ಮಾಡಿದಾಗ ಮಾತ್ರ ನಿಜವಾದ ಆತ್ಮ ನಿರ್ಭರ ಭಾರತ ಮೂಡಿಬರಲು ಸಾಧ್ಯ.ಇಲ್ಲದಿದ್ದರೆ ರೈತರ ತೋಟಗಳು ಸರಕಾರದ ಈ ಕಾನೂನುಗಳಿಂದ ಹಾನಿಯಾದರೆ ಯಾರೂ ಕೂಡ ನಷ್ಟ ನೀಡುದಿಲ್ಲ. ಹಾಗಾಗಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಈ ಬಗ್ಗೆ ಗಮನ ಹರಿಸಬೇಕು ಎಂದವರು ಒತ್ತಾಯಿಸಿದ್ದಾರೆ.

Related posts

ಧರ್ಮಸ್ಥಳ: ಬೋಳಿಯರ್ ನಲ್ಲಿ ಪ್ರತ್ಯಕ್ಷವಾಗುತ್ತಿದೆ ಕಾಡಾನೆಗಳ ಹಿಂಡು

Suddi Udaya

ವೇಣೂರು ಲಯನ್ಸ್ ವನದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ತೆಂಕಕಾರಂದೂರು: ವೃತ್ತಿಯಿಂದ ನಿವೃತ್ತಿಗೊಂಡ ಅಂಗನವಾಡಿ ಕಾರ್ಯಕರ್ತೆ ಶಾಂತಿಯವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಲಾಯಿಲ ಗ್ರಾಮ ಪಂಚಾಯತ್ ನಿಂದ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಯೂತ್ ತರಬೇತಿ ಕಾರ್ಯಕ್ರಮ

Suddi Udaya

ದ.ಕ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ: ಆರೆಂಜ್ ಅಲರ್ಟ್ ಘೋಷಣೆ ಇಂದು (ಜೂ.12) ದ.ಕ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ

Suddi Udaya
error: Content is protected !!