July 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸುಲ್ಕೇರಿಮೊಗ್ರು, ಬಿಲ್ಲವ ಸಂಘದ ಸದಸ್ಯರಿಂದ ಶಿವಗಿರಿ ತೀರ್ಥಯಾತ್ರೆ

ಅಳದಂಗಡಿ: ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಸುಲ್ಕೇರಿಮೊಗ್ರು, ಹಾಗೂ ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಸುಲ್ಕೇರಿಮೊಗ್ರು, ಇದರ ವತಿಯಿಂದ ಶಿವಗಿರಿ ಕ್ಷೇತ್ರ ದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು,


ಮಂಗಳೂರು ರೈಲ್ವೆ ನಿಲ್ದಾಣದಿಂದ ಹೊರಟು ವರ್ಕಳ ಶಿವಗಿರಿ ಆಶ್ರಮ ತಲುಪಿ ಅಲ್ಲಿಂದ ಶಾರದಾ ಪೀಠ ದರ್ಶನ, ಯಜ್ಞ ಮಂಟಪ, ವಿಶ್ರಾಂತಿ ಸ್ಥಳ ವೀಕ್ಷಿಸಿ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿಗಳ ಮೂಲ ಸಮಾಧಿ ದರ್ಶನ ಮಾಡಿ ಮಠದಲ್ಲಿ ಗುರು ಪೂಜೆ ಮುಗಿಸಿ ಚೆಂಬಲತಿಯಲ್ಲಿ ನಾರಾಯಣ ಗುರುಗಳ ಜನ್ಮ ಸ್ಥಳ ಸಂದರ್ಶಿಸಿ. ಮದ್ಯಾಹ್ನ ಕುಂನ್ನುಂಪಾರ ಬಾಲ ಸುಬ್ರಮಣ್ಯ ದೇವರ ದರ್ಶನ, ಗುರು ಪೂಜೆ, ಅರವಿಪುರ ದೇವರ ದರ್ಶನ ನಂತರ ತಮಿಳುನಾಡಿನ ಕನ್ಯಾಕುಮಾರಿಗೆ ಹೋಗಿ ಅಲ್ಲಿ ಕನ್ಯಾಕುಮಾರಿ ದೇವಿಯ ದರ್ಶನ ಪಡೆದು ಮರುದಿನ ಮರುತ ಮಲೆಯ ನಾರಾಯಣ ಗುರುಗಳು 6 ವರ್ಷ ತಪ್ಪಸ್ಸನ್ನಾಚರಿಸಿದ ಗುಹೆ ವೀಕ್ಷಣೆ ನಂತರ ಇಂದ್ರನು ಪಾಪವನ್ನು ತೊಳೆದ ಕೆರೆ ಹಾಗೂ ಸುಚೀಂದ್ರ ದೇವರ ದರ್ಶನ , ತಿರುವನಂತಪುರದ ಅನಂತ ಪದ್ಮನಾಭ ದೇವರ ದರ್ಶನ ಪಡೆದರು. ಈ ಯಾತ್ರೆಯ ಮಾಹಿತಿ ಹಾಗೂ ಮಾರ್ಗದರ್ಶನವನ್ನು ಶ್ರೀ ಸತ್ಯಾನಂದ ತೀರ್ಥ ಸ್ವಾಮಿಜಿ ಶಿವಗಿರಿಯವರು ನೀಡಿದರು. ಎರಡು ದಿನಗಳ ಈ ಯಾತ್ರೆಯಲ್ಲಿ 41 ಜನ ಸದಸ್ಯರು ಭಾಗವಹಿಸಿದರು.

Related posts

ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರು ಮತದಾನ ಕೇಂದ್ರಗಳಿಗೆ ಭೇಟಿ

Suddi Udaya

ಕೋಟ್ಯಾನ್ ಫ್ರೆಂಡ್ಸ್ ವಾಟ್ಸಾಪ್ ಗ್ರೂಪಿನಿಂದ ಎರಡನೇ ಸೇವಾ ಯೋಜನೆ ಹಸ್ತಾಂತರ

Suddi Udaya

ಕನ್ಯಾಡಿ ಶ್ರೀ ಸದಾಶಿವೇಶ್ವರ ಭಜನಾ ಮಂಡಳಿಯ ವಾರ್ಷಿಕೋತ್ಸವ

Suddi Udaya

ಎ.12:ಸಂಪತ್ ಬಿ ಸುವರ್ಣ ನೇತೃತ್ವದಲ್ಲಿ ಅಳದಂಗಡಿಯಲ್ಲಿ ಹನುಮಯಾಗ ಹಾಗೂ ಹನುಮೋತ್ಸವ ಕಾರ್ಯಕ್ರಮ: ಭಾರತೀಯರ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ತುಳು ನಾಟಕ ಪ್ರದರ್ಶನ

Suddi Udaya

ಖೋ ಖೋ ಪಂದ್ಯಾಟ : ನಯನಾಡು ಸರಕಾರಿ‌ ಪ್ರೌಢಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ ಹಾಗೂ ಬಾಲಕಿಯರ ತಂಡ ದ್ವಿತೀಯ ಸ್ಥಾನ

Suddi Udaya

ವೇಣೂರು ಮಹಾಮಸ್ತಕಾಭಿಷೇಕಕ್ಕೆ ಮೈಸೂರಿನ ರಾಜವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರಿಗೆ ಆಹ್ವಾನ ಪತ್ರಿಕೆ

Suddi Udaya
error: Content is protected !!