26.2 C
ಪುತ್ತೂರು, ಬೆಳ್ತಂಗಡಿ
August 29, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸುಲ್ಕೇರಿಮೊಗ್ರು, ಬಿಲ್ಲವ ಸಂಘದ ಸದಸ್ಯರಿಂದ ಶಿವಗಿರಿ ತೀರ್ಥಯಾತ್ರೆ

ಅಳದಂಗಡಿ: ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಸುಲ್ಕೇರಿಮೊಗ್ರು, ಹಾಗೂ ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಸುಲ್ಕೇರಿಮೊಗ್ರು, ಇದರ ವತಿಯಿಂದ ಶಿವಗಿರಿ ಕ್ಷೇತ್ರ ದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು,


ಮಂಗಳೂರು ರೈಲ್ವೆ ನಿಲ್ದಾಣದಿಂದ ಹೊರಟು ವರ್ಕಳ ಶಿವಗಿರಿ ಆಶ್ರಮ ತಲುಪಿ ಅಲ್ಲಿಂದ ಶಾರದಾ ಪೀಠ ದರ್ಶನ, ಯಜ್ಞ ಮಂಟಪ, ವಿಶ್ರಾಂತಿ ಸ್ಥಳ ವೀಕ್ಷಿಸಿ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿಗಳ ಮೂಲ ಸಮಾಧಿ ದರ್ಶನ ಮಾಡಿ ಮಠದಲ್ಲಿ ಗುರು ಪೂಜೆ ಮುಗಿಸಿ ಚೆಂಬಲತಿಯಲ್ಲಿ ನಾರಾಯಣ ಗುರುಗಳ ಜನ್ಮ ಸ್ಥಳ ಸಂದರ್ಶಿಸಿ. ಮದ್ಯಾಹ್ನ ಕುಂನ್ನುಂಪಾರ ಬಾಲ ಸುಬ್ರಮಣ್ಯ ದೇವರ ದರ್ಶನ, ಗುರು ಪೂಜೆ, ಅರವಿಪುರ ದೇವರ ದರ್ಶನ ನಂತರ ತಮಿಳುನಾಡಿನ ಕನ್ಯಾಕುಮಾರಿಗೆ ಹೋಗಿ ಅಲ್ಲಿ ಕನ್ಯಾಕುಮಾರಿ ದೇವಿಯ ದರ್ಶನ ಪಡೆದು ಮರುದಿನ ಮರುತ ಮಲೆಯ ನಾರಾಯಣ ಗುರುಗಳು 6 ವರ್ಷ ತಪ್ಪಸ್ಸನ್ನಾಚರಿಸಿದ ಗುಹೆ ವೀಕ್ಷಣೆ ನಂತರ ಇಂದ್ರನು ಪಾಪವನ್ನು ತೊಳೆದ ಕೆರೆ ಹಾಗೂ ಸುಚೀಂದ್ರ ದೇವರ ದರ್ಶನ , ತಿರುವನಂತಪುರದ ಅನಂತ ಪದ್ಮನಾಭ ದೇವರ ದರ್ಶನ ಪಡೆದರು. ಈ ಯಾತ್ರೆಯ ಮಾಹಿತಿ ಹಾಗೂ ಮಾರ್ಗದರ್ಶನವನ್ನು ಶ್ರೀ ಸತ್ಯಾನಂದ ತೀರ್ಥ ಸ್ವಾಮಿಜಿ ಶಿವಗಿರಿಯವರು ನೀಡಿದರು. ಎರಡು ದಿನಗಳ ಈ ಯಾತ್ರೆಯಲ್ಲಿ 41 ಜನ ಸದಸ್ಯರು ಭಾಗವಹಿಸಿದರು.

Related posts

ಹೋರಿ ಹಾಯ್ದು ಗಾಯಗೊಂಡಿದ್ದ ಗೇರುಕಟ್ಟೆಯ ವ್ಯಕ್ತಿ ಮೃತ್ಯು; ಉಪ್ಪಿನಂಗಡಿ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಆರೋಪ: ಪ್ರಕರಣ ದಾಖಲು

Suddi Udaya

ಗುರುವಾಯನಕೆರೆ: ಶಕ್ತಿನಗರದ ಬಳಿ ಕಾರು ಹಾಗೂ ಬೈಕ್ ಅಪಘಾತ

Suddi Udaya

ಹಿಂದೂ ಸಮಾಜಕ್ಕೆ ಶಕ್ತಿಯಾಗಿರುವ ಎಡನೀರು ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಕಾರಿಗೆ ದಾಳಿ: ಸೂಕ್ತ ಭದ್ರತೆ ನೀಡಿ, ರಕ್ಷಣೆ ನೀಡಬೇಕೆಂದು ಸರಕಾರಕ್ಕೆ ಶಾಸಕ ಹರೀಶ್ ಪೂಂಜ ಒತ್ತಾಯ

Suddi Udaya

ಕೋಲ್ಕತ್ತಾದಲ್ಲಿ ಮೆಡಿಕಲ್ ವಿದ್ಯಾರ್ಥಿನಿಯ ಹತ್ಯೆ ಖಂಡಿಸಿ ಉಜಿರೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಮೌನ ಆಚರಣೆ ಹಾಗೂ ಶ್ರದ್ಧಾಂಜಲಿ ಸಭೆ

Suddi Udaya

ಮೈಸೂರಿನಲ್ಲಿ ನಾಪತ್ತೆಯಾಗಿದ್ದ ಸ್ಕೂಟರ್ ಉಜಿರೆಯಲ್ಲಿ ಪತ್ತೆ: ಬೆಳ್ತಂಗಡಿ ಸಂಚಾರಿ ಪೊಲೀಸರಿಂದ ಸ್ಕೂಟರ್ ಪತ್ತೆ ಹಚ್ಚಿ ಮಾಲೀಕರಿಗೆ ಹಸ್ತಾಂತರ

Suddi Udaya

ಧರ್ಮಸ್ಥಳವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಅನುಷ್ಠಾನಗೊಳಿಸುವ ಬಗ್ಗೆ ಸಮಾಲೋಚನ ಸಭೆ

Suddi Udaya
error: Content is protected !!