29.9 C
ಪುತ್ತೂರು, ಬೆಳ್ತಂಗಡಿ
September 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆಗೆ ಅಡ್ಡಿ: ಗ್ರಾಹಕರ ಪರದಾಟ

ಬೆಳ್ತಂಗಡಿ: ತಾಲೂಕಿನಲ್ಲಿ ಪಡಿತರ ಪಡೆಯಲು ಸರ್ವರ್ ಸಮಸ್ಯೆ ಎದುರಾಗಿದ್ದು, ಗ್ರಾಹಕರು ಕಾದು ಕಾದು ಬಸವಳಿಯುತ್ತಿದ್ದಾರೆ. ಮೇ 15ರಂದು ಈ ತಿಂಗಳ ಪಡಿತರ ವಿತರಣೆ ನ್ಯಾಯಬೆಲೆ ಅಂಗಡಿಗಳಲ್ಲಿ ಆರಂಭವಾಗಿದ್ದು, ಆರಂಭದಿಂದಲೂ ಸರ್ವರ್ ಸಮಸ್ಯೆ ಕಂಡು ಬಂದಿತ್ತು. ಇದೀಗ ಮತ್ತಷ್ಟು ಸಮಸ್ಯೆ ಮುಂದುವರಿದಿದೆ.

ಪಡಿತರ ಸಾಮಗ್ರಿ ವಿತರಣೆಗೆ ಕಾರ್ಡ್ ದಾರರ ‘ಥಂಬ್’ ಅಗತ್ಯವಾಗಿದ್ದು, ಈ ವೇಳೆ ಸರ್ವರ್ ಸಮಸ್ಯೆ ಉಂಟಾಗುತ್ತಿದೆ. ನ್ಯಾಯಬೆಲೆ ಅಂಗಡಿ ತೆರೆಯುವ ಮೊದಲೇ ಸರದಿ ಸಾಲಲ್ಲಿ ನಿಲ್ಲುವ ಗ್ರಾಹಕರಿಗೆ ಕೆಲವೊಮ್ಮೆ ಸಂಜೆವರೆಗೂ ಕಾದರೂ ಪಡಿತರ ಸಾಮಗ್ರಿ ಸಿಗುತ್ತಿಲ್ಲ. ಮೇ 31 ಈ ತಿಂಗಳ ಪಡಿತರ ಅಕ್ಕಿ ಪಡೆಯಲು’ ಕೊನೆಯ ದಿನವಾಗಿದೆ. ಮೇ 31 ಭಾನುವಾರ ಆಗಿದ್ದು, ಹೆಚ್ಚಿನ ಪಡಿತರ ಅಂಗಡಿಗಳಿಗೆ ರಜೆ ಇರುವ ಕಾರಣ 30ರೊಳಗೆ ಪಡಿತರ ಪಡೆಯಬೇಕಿದೆ. ಒಂದು ‘ಥಂಬ್ ಪಡೆಯಲು ಕೆಲವೊಮ್ಮೆ ಅರ್ಧ ಗಂಟೆಗಿಂತಲೂ ಅಧಿಕ ಸಮಯ ಬೇಕಾಗುತ್ತಿದ್ದು ದಿನಕ್ಕೆ ಗರಿಷ್ಠ 20 ಮಂದಿ ಮಾತ್ರ ಪಡಿತರ ಪಡೆಯುವಂತಾಗಿದೆ. ‘ಥಂಬ್’ ಸಮಸ್ಯೆ ಕುರಿತು ಅರ್ಥವಾಗದ ಕೆಲವು ಮಂದಿ ನ್ಯಾಯಬೆಲೆ ಅಂಗಡಿಯವರನ್ನು ತರಾಟೆಗೆ ತೆಗೆದುಕೊಳ್ಳುವುದು ಕಂಡುಬಂದಿದೆ.

ತಾಲೂಕಿನ ಒಂದೊಂದು ಅಂಗಡಿಯಲ್ಲೂ ಅಧಿಕ ಪಡಿತರ ನ್ಯಾಯಬೆಲೆ 500ಕ್ಕಿಂತಲೂ ಚೀಟಿದಾರರಿದ್ದು, ಕೆಲವೆಡೆ ಇನ್ನು 200ಕ್ಕಿಂತ ಅಧಿಕ ಮಂದಿ ಪಡಿತರ ಪಡೆಯಲು ಬಾಕಿ ಇದೆ. ಸಹಕಾರ ಸಂಘಗಳಲ್ಲಿರುವ ಅನೇಕ ನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿತ ಸಮಯಕ್ಕಿಂತ ಅಧಿಕ ಹೊತ್ತು ಪಡಿತರ ವಿತರಣೆ ಸೇವೆ ನೀಡುವುದು ಕಂಡು ಬರುತ್ತಿದೆ. ಈ ಬಗ್ಗೆ ಆಹಾರ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅವರಿಂದಲೂ ಸಮರ್ಪಕ ಉತ್ತರ ದೊರೆಯುತ್ತಿಲ್ಲ. ಮೇ ತಿಂಗಳ ಪಡಿತರ ಪಡೆಯಲು ದಿನಾಂಕ ವಿಸ್ತರಿಸದಿದ್ದರೆ ಹಲವು ಮಂದಿ ಕಾರ್ಡ್‌ದಾರರು ಈ ಸೌಲಭ್ಯದಿಂದ ವಂಚಿತರಾಗಲಿದ್ದಾರೆ.

Related posts

ಕರಿಮಣೇಲು ಬಳಿ ರಾಜ್ಯ ಹೆದ್ದಾರಿಗೆ ಉರುಳಿ ಬಿದ್ದ ಮರ

Suddi Udaya

ಅರಸಿನಮಕ್ಕಿ: ವಾತ್ಸಲ್ಯ ಮನೆಗೆ ಅಡಿಗಲ್ಲು ಕಾರ್ಯಕ್ರಮ

Suddi Udaya

“ನಾರಿ ಇನ್ ಪಿಂಕ್ ಸಾರಿ” ಕ್ಯಾನ್ಸರ್ ಜಾಗೃತಿ ಜಾಥಾ ಮತ್ತು ಕ್ಯಾನ್ಸರ್ ಮಾಹಿತಿ ಕಾರ್ಯಕ್ರಮಕ್ಕೆ ಜೆಸಿಐ ಭಾರತದಿಂದ ಬೆಳ್ತಂಗಡಿ ಜೆಸಿಐ ಗೆ ವಿಶೇಷ ಮನ್ನಣೆ

Suddi Udaya

ಸೀರೋ ಮಲಬಾರ್ ಕೆಥೋಲಿಕ್ ಬೆಳ್ತಂಗಡಿ ಧರ್ಮಪ್ರಾಂತ್ರ್ಯದ ಧರ್ಮಾಧ್ಯಕ್ಷರಿಂದ “ಬೆಸ್ಟ್ ಎಂಎಲ್ಎ” ಅವಾರ್ಡ್ ಪಡೆದ ಶಾಸಕ ಹರೀಶ್ ಪೂಂಜರಿಗೆ ಅಭಿನಂದನೆ

Suddi Udaya

ಕುದ್ರಡ್ಕ ಸರಕಾರಿ ಶಾಲೆಯಲ್ಲಿ ಎಲ್‌ಕೆಜಿ – ಯುಕೆಜಿ ತರಗತಿಗಳ ಆರಂಭ

Suddi Udaya

ಕಾಯರ್ತ್ತಡ್ಕ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಶ್ರೀಮತಿ ಚೈತನ್ಯ ಮತ್ತು ನಿರಂಜನ ಗೌಡ ರವರಿಂದ ವಿದ್ಯುತ್ ಚಾಲಿತ ಗಂಟೆ ಕೊಡುಗೆ

Suddi Udaya
error: Content is protected !!