September 1, 2026
ಜಿಲ್ಲಾ ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಜಿಲ್ಲೆಯ ಬಡವರ ಮನೆ ಕಟ್ಟುವ ಮರಳಿನ ಸಮಸ್ಯೆ ಸರಿಪಡಿಸುವಂತೆ ಮೋಹನ್ ಗೌಡ ಕಲ್ಮಂಜ ರವರಿಂದ ಸರಕಾರಕ್ಕೆ ಮನವಿ

ಬೆಳ್ತಂಗಡಿ: ನೂತನ ಸರಕಾರ ರಚನೆ ಆಗ್ತಾ ಇರುವ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮರಳು, ಕೆಂಪು ಕಲ್ಲು ಸಮಸ್ಯೆ ಈ ಉದ್ಯಮವನ್ನೇ ನೆಚ್ಚಿಕೊಂಡ ಸಣ್ಣ ಸಣ್ಣ ಉದ್ಯಮಿ ಕಾಂಟ್ರಾಕ್ಟ್ ದಾರರು ತೀರಾ ಸಮಸ್ಯೆಯಲ್ಲಿದ್ದು ಮನೆಕಟ್ಟುವ ಬಡ ಮಧ್ಯಮ ವರ್ಗ ಮರಳು ಸಿಗದೇ ತೊಂದರೆಯಲ್ಲಿದೆ ಒಂದು ಲೋಡ್ ಮರಳು 12000 ಸಿಗುವ ಮರಳು 20ಸಾವಿರ ಆಗಿದೆ.

ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆಗೆ ಬೇಕಾದ ಕಟ್ಟಡಕ್ಕೆ ಬೇಕಾದ ಮರಳಿಗೆ ಆಯಾ ಪಂಚಾಯತ್ ನಿಂದ ಒಂದು ಪರ್ಮಿಷನ್ ,ಒಂದು ಕಂದಾಯ ಅಂತ ಸಣ್ಣ ಮಟ್ಟದಲ್ಲಿ ಒಂದು ಪಿಕಪ್ ಗೆ ಒಂದು ಟಿಪ್ಪರ್ ಗೆ ಇಂತಿಷ್ಟು ದರ ಕಂದಾಯ ಎಂದು ನಿಗದಿ ಮಾಡಿ ನದಿಯಲ್ಲಿ ಪ್ರಕೃತಿ ಯಿಂದ ದೊರೆಯುವ ಅಪಾರ ಮರಳಿನಿಂದ ಆಯಾ ಪಂಚಾಯತ್ ಗೆ ಒಂದಷ್ಟು ಆದಾಯ ಬಂದರೆ ಆಯಾ ಪಂಚಾಯತ್ ಗೂ ಅಭಿವೃದ್ಧಿಗೆ ಆದಾಯ ಹಾಗೂ ಯಾವುದೇ ಅಡೆ ತಡೆ ಇಲ್ಲದೇ ಜನರಿಗೆ ಕಾಮಗಾರಿಗೆ ಅನುಕೂಲ ಆಗುತ್ತೆ ಸರಕಾರಕ್ಕೂ ಒಂದು ರೀತಿಯ ಆದಾಯ ಹೆಚ್ಚುವರಿ ಆಗಿ ದೊರೆಯುತ್ತದೆ. ಈ ನಿಟ್ಟಿನಲ್ಲಿ ಸರಕಾರ ಯೋಚಿಸಿ ನಿರ್ಧಾರ ಮಾಡಬೇಕು ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ ಸರಕಾರಕ್ಕೆ ವಿನಂತಿಸಿ ಅಗ್ರಹ ಮಾಡಿದ್ದಾರೆ.

Related posts

ಕಾಯರ್ತಡ್ಕ- ಮುದ್ದಿಗೆ ಸಂಪರ್ಕ ರಸ್ತೆಯಲ್ಲಿ ಕಾಡಾನೆಗಳ ಓಡಾಟ

Suddi Udaya

ಮಹೇಶ್ ಶೆಟ್ಟಿ ತಿಮರೋಡಿಯನ್ನು ಕೋರ್ಟ್ ಗೆ ಹಾಜರು ಪಡಿಸಿದ ಬ್ರಹ್ಮಾವರ ಪೊಲೀಸರು

Suddi Udaya

ಬಾರ್ಯ : ಸುಂದರ ನೂರಿತ್ತಾಯ ಹೃದಯಾಘಾತದಿಂದ ನಿಧನ

Suddi Udaya

ಅಳದಂಗಡಿ ವಲಯ ಅರಣ್ಯದಲ್ಲಿ ಹಣ್ಣು ಹಂಪಲುಗಳ ಗಿಡ ನಾಟಿ ಕಾರ್ಯಕ್ರಮ

Suddi Udaya

ನಡ ಸರಕಾರಿ ಪ್ರೌಢಶಾಲೆ ಶಾಲಾ ಪ್ರಾರಂಭೋತ್ಸವ

Suddi Udaya

ಪುತ್ತೂರು: ಹಿಂದೂ ಕಾರ್ಯಕರ್ತರಿಗೆ ಪೊಲೀಸರಿಂದ ಮಾರಣಾಂತಿಕ ಹಲ್ಲೆ ಪ್ರಕರಣ: ಕಾರ್ಯಕರ್ತರ ಆರೋಗ್ಯ ವಿಚಾರಿಸಿದ ಶಾಸಕ ಹರೀಶ್ ಪೂಂಜ

Suddi Udaya
error: Content is protected !!