ಬೆಳ್ತಂಗಡಿ: ಕಾಜೂರಿನ ಅಭಿವೃದ್ಧಿ, ಶಿಕ್ಷಣ, ಸಾಮಾಜಿಕ ಸೇವೆ ಹಾಗೂ ಸಮುದಾಯದ ಏಳಿಗೆಯ ಕನಸನ್ನು ಹೊತ್ತು ವಿದೇಶದಲ್ಲಿ ದುಡಿಯುತ್ತಿರುವ ಯುವ ಮಿತ್ರರ ತಂಡವಾದ ಕಾಜೂರು ಡೆವಲಪ್ಮೆಂಟ್ ಕಮೀಟಿ ಸೌದಿ ಅರೇಬಿಯಾ (K.D.C) ಯ ನೂತನ ಸಾಲಿನ ಆಡಳಿತ ಮಂಡಳಿ ರಚನೆ ಹಾಗೂ ಸಯ್ಯದ್ ಕಾಜೂರು ತಂಗಲ್ ರವರ ಮಾರ್ಗದರ್ಶನದಲ್ಲಿ ಮುನ್ನಡೆಯುವ ಕೆಡಿಸಿ ಸಮಿತಿಯ ಮಹಾಸಭೆಯು ಮೇ 22 ರಂದು ನಡೆಯಿತು.
ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಜನಾಬ್ ಶರೀಫ್ ಜೆ.ಹೆಚ್ ಕಾಜೂರು , ಪ್ರದಾನ ಕಾರ್ಯದರ್ಶಿ ಅಬ್ದುಲ್ ವಹಾಬ್ azhari ,ಕೋಶಾಧಿಕಾರಿಯಾಗಿ ಸಿದ್ದಿಕ್ ಪಿಎ ,ಕಾರ್ಯ ನಿರತ ಸದಸ್ಯರಾಗಿ ಸಿಕಂದರ್ ಹೆಡ್ಯಾ ಜಾಬಿರ್ ಕಾಜೂರು ,ಲತೀಫ್ ಪಿಎ ,ಮನ್ಸೂರ್ ಡಿ.ಹೆಚ್,ಸುಹೈಬ್ ಕಾಜೂರು, ನವಾಜ್ ಕಾಜೂರು ,ಮುಹಮ್ಮದ್ ಹಾಶಿಂ ಕಾಜೂರು ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ಹನೀಫ್ ಕೆ ಎಂ,ಇಬ್ರಾಹಿಂ ಇಬ್ಬಿ,ಹಾರಿಸ್ ಜೆ.ಹೆಚ್, ಇಸ್ಮಾಯಿಲ್ ಹಾಜಿ ಮಕ್ಕ , ಸಿನಾನ್ ಬಹ್ರೈನ್, ಫಾರೂಕ್ ಜೆ.ಹೆಚ್, ರಫೀಕ್ ಕಾಜೂರು, ಗೌರವಾಧ್ಯಕ್ಷರಾಗಿ ಸಫ್ವಾನ್ ಸಯ್ಯದ್ ಕಾಜೂರು ತಂಗಲ್, ನಿರ್ದೇಶಕರಾಗಿ ಕೆ ಯು ಮೊಹಮ್ಮದ್ ಸಕಾಫಿ ರವರನ್ನು ಅವಿರೋಧವಾಗಿ ನೇಮಕಗೊಳಿಸಲಾಯಿತು.












