ಬೆಳ್ತಂಗಡಿ: ಬೆಂಗಳೂರು ದೂರದರ್ಶನ ಕೇಂದ್ರದ ಡಿ ಡಿ ಚಂದನ ವಾಹಿನಿಯ ಪ್ರಸಾರ ಭಾರತೀಯವರು ಆಯೋಜಿಸುವ ಆಡಿಷನ್ನಲ್ಲಿ ಭರತನಾಟ್ಯ ವಿಭಾಗದ ‘ಬಿ’ ಗ್ರೇಡ್ ಕಲಾವಿದರಾಗಿ ಅರಸಿನಮಕ್ಕಿಯ ಕೃಷಿಕರಾದ ಎಸ್ ಕೇಶವ ರಾವ್ ಹಾಗೂ ಉಪನ್ಯಾಸಕಿ ಅನುರಾಧ ಕೆ ರಾವ್ ಇವರ ಮಗಳಾದ ಅಂಜನಾ ಕೆ ರಾವ್ ಆಯ್ಕೆಗೊಂಡಿದ್ದಾರೆ.
ಬಿ. ಕಾಂ ಪದವೀಧರೆಯಾಗಿರುವ ಇವರು ಕಲ್ಲಡ್ಕದ ಗುರು ವಿದುಷಿ ವಿದ್ಯಾ ಮನೋಜ್ ಅವರಿಂದ ಕಳೆದ 16 ವರ್ಷಗಳಿಂದ ಭರತನಾಟ್ಯ ನೃತ್ಯಾಭ್ಯಾಸ ಮಾಡುತ್ತಿದ್ದು 2025 ರಲ್ಲಿ ಭರತನಾಟ್ಯದಲ್ಲಿ ವಿದ್ವತ್ ಪದವಿಯನ್ನು ಪಡೆದಿರುತ್ತಾರೆ.












