23.8 C
ಪುತ್ತೂರು, ಬೆಳ್ತಂಗಡಿ
July 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ರೈತ ಸಂಪರ್ಕ ಕೇಂದ್ರಗಳಲ್ಲಿ ಶೇ.100ರಷ್ಟು ಸಹಾಯಧನದಲ್ಲಿ ಸಹ್ಯಾದ್ರಿ ಬ್ರಹ್ಮ ಭತ್ತದ ಬಿತ್ತನೆ ಬೀಜ ಲಭ್ಯ

ಬೆಳ್ತಂಗಡಿ: ತಾಲೂಕಿನ ವೇಣೂರು, ಕೊಕ್ಕಡ ಹಾಗೂ ಬೆಳ್ತಗಂಡಿ ರೈತ ಸಂಪರ್ಕ ಕೇಂದ್ರಗಳಲ್ಲಿ 2026-27 ನೇ ಸಾಲಿನ ಎನ್‌ಎಫ್‌ಎಸ್‌ಎನ್‌ಎಮ್ ಯೋಜನೆಯಡಿಯಲ್ಲಿ ಶೇ.100ರಷ್ಟು ಸಹಾಯಧನದಲ್ಲಿ ಭತ್ತದ ಬಿತ್ತನೆ ಬೀಜವು (ಸಹ್ಯಾದ್ರಿ ಬ್ರಹ್ಮ) ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದ್ದು ಭತ್ತ ಕೃಷಿಕರು ಸದುಪಯೋಗ ಪಡೆದುಕೊಳ್ಳುವಂತೆ ಬೆಳ್ತಂಗಡಿ ಕೃಷಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಈ ತಳಿಯ ವಿಶೇಷತೆ:
ಮಧ್ಯಮ ಅವಧಿಯ ಕೆಂಪು ಅಕ್ಕಿಯ ತಳಿ (130-135 ದಿನಗಳು), ಹೆಕ್ಟೇರ್‌ಗೆ 50 ರಿಂದ 55 ಕ್ವಿಂಟಾಲ್ ಇಳುವರಿ, ಕಣೆ ಕೀಟ ಬಾಧೆಗೆ ಸಹಿಷ್ಣುತೆಯನ್ನು ಹೊಂದಿದೆ. ದಪ್ಪ ಮತ್ತು ಮಧ್ಯಮ ಗಾತ್ರದ ಭತ್ತ ಕರಾವಳಿ ಪ್ರದೇಶಕ್ಕೆ (ವಲಯ-೧೦) ಸೂಕ್ತವಾದ ತಳಿ. ಉತ್ತಮ ಇಳುವರಿ ನೀಡುವ ರೈತ ಸ್ನೇಹಿ ತಳಿ. ಲಘು ಪೋಷಕಾಂಶಗಳು, ಕೀಟನಾಶಕಗಳು, ಟ್ರೈಕೊಡರ್ಮಾ ಹಾಗೂ ಸಾವಯವ ಗೊಬ್ಬರ ಶೇ.೧೦೦ ಸಹಾಯಧನದಲ್ಲಿ ನೀಡಲಾಗುವುತ್ತದೆ.

ಅರ್ಜಿ ಸಲ್ಲಿಕೆ ಹೇಗೆ:

  • ಎಕರೆ ಅಥವಾ ಅದಕ್ಕಿಂತ ಹೆಚ್ಚಿನ ಜಮೀನಿನ ಪಹಣಿ
  • ಆಧಾರ್ ಕಾರ್ಡ್ ಜೆರಾಕ್ಸ್
  • ಬ್ಯಾಂಕ್ ಪಾಸ್‌ಬುಕ್ ಮೊದಲ ಪುಟದ ಜೆರಾಕ್ಸ್
  • 1 ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
  • ಎಸ್‌ಸಿ/ಎಸ್‌ಟಿ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ

Related posts

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಹಾಯಕ ಇಂಜಿನಿಯರ್ ಗಂಗಾಧರ ಬಳಂಜರವರಿಗೆ ಸೇವಾ ನಿವೃತ್ತಿ

Suddi Udaya

ಕಳೆಂಜ: ನರೇಗಾ ಯೋಜನೆಯ ಕೂಲಿಕಾರರಿಗೆ ಆರೋಗ್ಯ ತಪಾಸಣೆ

Suddi Udaya

ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಬಳ್ಳಮಂಜ ನೊರೋಳ್ ಪಲ್ಕೆ ನಿವಾಸಿ ಬಾಬು ಮಲೆಕುಡಿಯ ನಿಧನ

Suddi Udaya

ನಾಳ ಗಂಪದಕೋಡಿ ನಿವಾಸಿ ಶ್ರೀಮತಿ ನಾಗರತ್ನಮ್ಮ ನಿಧನ

Suddi Udaya

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ರವರಿಗೆ ಐಐಬಿ ಬೆಸ್ಟ್ ಬುಸಿನೆಸ್ ಲೀಡರ್‌ಶಿಪ್ ಅವಾರ್ಡ್ -2023 ಪ್ರಶಸ್ತಿ

Suddi Udaya
error: Content is protected !!