ಬೆಳ್ತಂಗಡಿ: ಎಸ್.ಕೆ.ಗೋಲ್ಡ್ ಸ್ಮಿತ್ಸ್ ಮಂಗಳೂರು ಸಂಸ್ಥೆಯ ಗುರುವಾಯನಕೆರೆ ಶಾಖೆ, ಸಂತೆಕಟ್ಟೆ-ಬೆಳ್ತಂಗಡಿಯಲ್ಲಿ ವೃತ್ತಿ ಸೇವೆ ಸಲ್ಲಿಸಿ ಪುತ್ತೂರು ಶಾಖೆಗೆ ವರ್ಗಾವಣೆಗೊಂಡ ಶಾಖಾ ವ್ಯವಸ್ಥಾಪಕ ಪ್ರಶಾಂತ್ ಎಚ್ ಆಚಾರ್ಯ ಇವರನ್ನು ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಮಂಜುನಾಥ ಆಚಾರ್ಯ ಅಳದಂಗಡಿ, ಶಾಖಾ ವ್ಯವಸ್ಥಾಪಕರಾಗಿ ಪ್ರಭಾರ ವಹಿಸಿಕೊಂಡಿರುವ ಧನಂಜಯ ಆಚಾರ್ಯ, ಶಾಖಾ ಸಿಬ್ಬಂದಿಗಳಾದ ರಾಮ್ ಪ್ರಸಾದ್ ಎನ್.ಎಸ್, ಸುಶಾಂತ್, ಯಜ್ಞೇಶ್ ಆಚಾರ್ಯ, ವಿಶ್ವಕರ್ಮಾಭ್ಯುದಯ ಸಭಾ (ರಿ.) ಬೆಳ್ತಂಗಡಿ ಇದರ ಅಧ್ಯಕ್ಷರು, ಸಂಸ್ಥೆಯ ಚಿನ್ನಾಭರಣ ಮೌಲ್ಯ ಮಾಪಕರಾದ ಗಣೇಶ್ ಆಚಾರ್ಯ ಬಿ., ಜನತಾ ನಿಧಿ ಸಂಗ್ರಹಕರಾದ ಗೌರಿಪ್ರಸಾದ್, ರೇವತಿ ಜಯರಾಮ್ ಆಚಾರ್ಯ, ಗ್ರಾಹಕ ಮಿತ್ರರು, ಮತ್ತಿತರರು ಉಪಸ್ಥಿತರಿದ್ದರು.












