ಬೆಳ್ತಂಗಡಿ: ತಾಲೂಕಿನ ವೇಣೂರು, ಕೊಕ್ಕಡ ಹಾಗೂ ಬೆಳ್ತಗಂಡಿ ರೈತ ಸಂಪರ್ಕ ಕೇಂದ್ರಗಳಲ್ಲಿ 2026-27 ನೇ ಸಾಲಿನ ಎನ್ಎಫ್ಎಸ್ಎನ್ಎಮ್ ಯೋಜನೆಯಡಿಯಲ್ಲಿ ಶೇ.100ರಷ್ಟು ಸಹಾಯಧನದಲ್ಲಿ ಭತ್ತದ ಬಿತ್ತನೆ ಬೀಜವು (ಸಹ್ಯಾದ್ರಿ ಬ್ರಹ್ಮ) ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದ್ದು ಭತ್ತ ಕೃಷಿಕರು ಸದುಪಯೋಗ ಪಡೆದುಕೊಳ್ಳುವಂತೆ ಬೆಳ್ತಂಗಡಿ ಕೃಷಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಈ ತಳಿಯ ವಿಶೇಷತೆ:
ಮಧ್ಯಮ ಅವಧಿಯ ಕೆಂಪು ಅಕ್ಕಿಯ ತಳಿ (130-135 ದಿನಗಳು), ಹೆಕ್ಟೇರ್ಗೆ 50 ರಿಂದ 55 ಕ್ವಿಂಟಾಲ್ ಇಳುವರಿ, ಕಣೆ ಕೀಟ ಬಾಧೆಗೆ ಸಹಿಷ್ಣುತೆಯನ್ನು ಹೊಂದಿದೆ. ದಪ್ಪ ಮತ್ತು ಮಧ್ಯಮ ಗಾತ್ರದ ಭತ್ತ ಕರಾವಳಿ ಪ್ರದೇಶಕ್ಕೆ (ವಲಯ-೧೦) ಸೂಕ್ತವಾದ ತಳಿ. ಉತ್ತಮ ಇಳುವರಿ ನೀಡುವ ರೈತ ಸ್ನೇಹಿ ತಳಿ. ಲಘು ಪೋಷಕಾಂಶಗಳು, ಕೀಟನಾಶಕಗಳು, ಟ್ರೈಕೊಡರ್ಮಾ ಹಾಗೂ ಸಾವಯವ ಗೊಬ್ಬರ ಶೇ.೧೦೦ ಸಹಾಯಧನದಲ್ಲಿ ನೀಡಲಾಗುವುತ್ತದೆ.
ಅರ್ಜಿ ಸಲ್ಲಿಕೆ ಹೇಗೆ:
- ಎಕರೆ ಅಥವಾ ಅದಕ್ಕಿಂತ ಹೆಚ್ಚಿನ ಜಮೀನಿನ ಪಹಣಿ
- ಆಧಾರ್ ಕಾರ್ಡ್ ಜೆರಾಕ್ಸ್
- ಬ್ಯಾಂಕ್ ಪಾಸ್ಬುಕ್ ಮೊದಲ ಪುಟದ ಜೆರಾಕ್ಸ್
- 1 ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
- ಎಸ್ಸಿ/ಎಸ್ಟಿ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ












