ಮುಂಡಾಜೆ: ಮುಂಡಾಜೆ ಹೆದ್ದಾರಿಯ ಸೀಟು ಬಳಿ ಭೀಕರ ಗಾಳಿ ಮಳೆಗೆ ರಸ್ತೆಗೆ ಮರ ಬಿದ್ದು ಸಂಚಾರದಲ್ಲಿ ವ್ಯತ್ಯಯವಾದ ಘಟನೆ ಜೂ.9ರಂದು ನಡೆದಿದೆ.
ರಸ್ತೆಗೆ ಮರ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದ್ದು ಕೂಡಲೇ ಸ್ಥಳೀಯರಾದ ಸಮಾಜಸೇವಕ ಸಚಿನ್ ಭಿಡೆ ಹಾಗೂ ಗಣೇಶ ಬಂಗೇರ ಅವರ ನೇತೃತ್ವದಲ್ಲಿ ಮರತೆರವು ಕಾರ್ಯ ನಡೆಸಿದರು.
ಇಲ್ಲಿನ ರಸ್ತೆಯ ಬದಿ ಹಲವಾರು ಅಪಾಯಕಾರಿ ಮರಗಳು ಇದ್ದು ಇದು ತೆರೆವು ಗೊಳ್ಳಬೇಕಿದ್ದರೆ ಜೀವಬಲಿಯಾಗಬೇಕು ಎಂದು ವಾಹನ ಸವಾರರು, ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.












