ಬೆಳ್ತಂಗಡಿ: ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಕ್ರಾಡಿ ಶಾಖೆಯ ಕೃಷಿ ಗೊಬ್ಬರ ಮಾರಾಟ ಕೇಂದ್ರ ಹಾಗೂ ಎಟಿಎಂ ಇದರ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜರವರು ನೆರವೇರಿಸಿ ಶುಭಕೋರಿದರು.

ಪ್ರಗತಿಪರ ಕೃಷಿಕ ಪೊನ್ನೆಮಾರಡ್ಡ ಮನೆಯ ರಾಜು ಶೆಟ್ಟಿ ಪಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ನಾರಾವಿ ಸೊಸೈಟಿ ಅಧ್ಯಕ್ಷ ಎನ್ ಸುಧಾಕರ ಭಂಡಾರಿ ಶಾಸಕರನ್ನು ಮತ್ತು ಗ್ರಾಹಕರನ್ನು ಆತ್ಮೀಯವಾಗಿ ಸ್ವಾಗತಿಸಿ, ಸೊಸೈಟಿಯ ಕಾರ್ಯವೈಖರಿ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಇಓ ಶಶಿಕಾಂತ್ ಜೈನ್, ನಾರಾವಿ ಗ್ರಾ.ಪಂ ಮಾಜಿ ಅಧ್ಯಕ್ಷ ರಾಜವರ್ಮ ಜೈನ್, ಸೊಸೈಟಿ ನಿರ್ದೇಶಕರಾದ ಸದಾನಂದ ಗೌಡ ಸುಲ್ಕೇರಿ, ಕೃಷ್ಣಪ್ಪ ಪೂಜಾರಿ ಕುತ್ಲೂರು, ವಿಠಲ ಪೂಜಾರಿ ಸಾವ್ಯ, ಉಮೇಶ್ ಎಂ.ಕೆ ನಾರಾವಿ, ರಾಜೇಂದ್ರ ಕುಮಾರ್ ನಾರಾವಿ, ಶೇಖರ್ ಕುತ್ಲೂರು, ಯಶೋದ ಕುತ್ಲೂರು, ಸುಜಲತಾ ನಾರಾವಿ, ಪದ್ಮಶ್ರೀ ಕೊಕ್ರಾಡಿ, ಸುಪ್ರಿಯಾ ನಾರಾವಿ, ಕೊಕ್ರಾಡಿ ಶಾಖಾ ಮುಖ್ಯಸ್ಥ ಶೇಖರ್, ಪ್ರಮಖರಾದ ಉದಯ ಹೆಗ್ಡೆ, ಅಭಿಜಿತ್ ಜೈನ್, ಹರೀಶ್ ಹೆಗ್ಡೆ ಸಾವ್ಯ, ಲಕ್ಷ್ಮಣ್ ಪೂಜಾರಿ ಕೊಕ್ರಾಡಿ, ಮೋಹನ್ ಹೆಗ್ಡೆ ಸಾವ್ಯ, ಸಂತೋಷ್ ಕುತ್ಲೂರು, ವಿಷ್ಣು ಕೊಕ್ರಾಡಿ, ಆಶಾಲತಾ ನಾರಾವಿ ಹಾಗೂ ಊರವರು, ಸಹಕಾರಿ ಸಂಘದ ಸದಸ್ಯರು, ಸಿಎ ಬ್ಯಾಂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನವೋದಯ ಸ್ವಸಹಾಯ ಸಂಘಗಳ ಮೇಲ್ವಿಚಾರಕ ಯಶೋಧರ್ ಬಂಗೇರ ನಿರೂಪಿಸಿದರು.












