ಬೆಳ್ತಂಗಡಿ: ಸುಮಾರು 14 ವರ್ಷ ಕಾಲ ಬೆಳ್ತಂಗಡಿಯ ಸೋಜಾ ಸಂಸ್ಥೆಯಲ್ಲಿ ಕೆಲಸ ಮಾಡಿದ ರಮೇಶ್ ಅವರಿಗೆ ಬೀಳ್ಕೊಡುಗೆ ಸಮಾರಂಭವು ಜೂ.10 ರಂದು ಸೋಜಾ ಇಲೆಕ್ಟ್ರಾನಿಕ್ಸ್ ನ ಸಂಸ್ಥೆಯಲ್ಲಿ ನಡೆಯಿತು.
ಈ ವೇಳೆ ರಮೇಶ್ ರವರನ್ನು ಗೌರವಿಸಿ ಸಂಸ್ಥೆಯ ವತಿಯಿಂದ ರೆಫ್ರಿಜರೇಟರ್ ನ್ನು ಕೊಡುಗೆಯಾಗಿ ನೀಡಲಾಯಿತು.
ಸಮಾರಂಭದಲ್ಲಿ ಸಂತ ಲೋರೆನ್ಸ್ ಚರ್ಚ್ ಬೆಳ್ತಂಗಡಿ ಇಲ್ಲಿಯ ಪ್ರಧಾನ ಧರ್ಮಗುರುಗಳಾದ ವಂ. ಜೋಸ್ ಅಯಂಕುಡಿ, ವಿಜಯವಾಣಿ ವರದಿಗಾರ ಮನೋಹರ್ ಬಳoಜ, ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತುಕಾರಾಮ ಬಿ., ಸಿವಿಲ್ ಇಂಜಿನಿಯರ್ ರಾಹುಲ್, ಸೋಜಾ ಸಂಸ್ಥೆಯ ಮಾಲೀಕರಾದ ಅಲ್ಫೋನ್ಸ್ ಫ್ರಾoಕೋ, ಮೇನೇಜರ್ ಲ್ಯಾನ್ಸಿ ಡಿ.ಸೋಜಾ, ರಮೇಶ್, ಪವಿತ್ರ, ಶಶಿಕಲಾ, ಹಾಗೂ, ಕು. ಮೀನಾಕ್ಷಿ ಹಾಜರಿದ್ದರು.













