ಬೆಳ್ತಂಗಡಿ: ನರೇಂದ್ರ ಮೋದಿಯವರು ಪ್ರದಾನಮಂತ್ರಿಯಾಗಿ ಸುದೀರ್ಘ 12 ವರ್ಷ ವರುಷ ಪೂರೈಸಿದ ಹಿನ್ನೆಲೆಯಲ್ಲಿ ಕಾಯರ್ತಡ್ಕ ಉಮಾಮಹೇಶ್ವರ ದೇವಸ್ಥಾನದಲ್ಲಿ ಮೋದಿಯವರ ಅಯುರಾರೊಗ್ಯ ಮತ್ತು ದೀರ್ಘಾಯುಷ್ಯ ವೃದ್ದಿಸಲಿ ದೇಶವನ್ನು ಮುನ್ನಡೆಸುವ ಶಕ್ತಿ ಇನ್ನಷ್ಟು ಕರುಣಿಸಲಿ ಎಂದು ಕಳೆಂಜ ಶಕ್ತಿ ಕೇಂದ್ರ ವತಿಯಿಂದ ರುದ್ರಭಿಷೇಕ ಮತ್ತು ಸಂಕಲ್ಪ ಮಾಡಲಾಯಿತು.
ಈ ಸಂದರ್ಭದಲ್ಲಿ ಧರ್ಮಸ್ಥಳ ಮಾಹಶಕ್ತಿ ಕೇಂದ್ರ ಪ್ರಮುಖ್ ಹರೀಶ್ ಕೊಯಿಲ, ಶಕ್ತಿ ಕೇಂದ್ರ ಪ್ರಮುಖ್ ಧನಂಜಯ ಗೌಡ ,ಮಾಜಿ ಪಂಚಾಯತ್ ಅಧ್ಯಕ್ಷೆ ಶಾರದ ಕೊಡಂಗೆ, ಮಾಜಿ ಪಂಚಾಯತ್ ಉಪಾಧ್ಯಕ್ಷರು ಮಂಜುನಾಥ ಗೌಡ ಹರಿತ್ತಕಜೆ, ಕೃಷಿ ಪತ್ತಿನ ಸಹಕಾರಿ ಸಂಘ ನಿಡ್ಲೆ ಇದರ ನಿರ್ದೇಶಕಿ ವಿಜಯಲಕ್ಷ್ಮಿ ಉದ್ರಜೆ, ಬೂತ್ ಅಧ್ಯಕ್ಷರಾದ ಉಮೇಶ್ ನಿಡ್ಹಜೆ, ಹರೀಶ್ ವಳಗುಡ್ಡೆ ಮತ್ತು ಕೃಷಪ್ಪ ಗೌಡ ಕೊಡಂಗೆ ಉಪಸ್ಥಿತರಿದ್ದರು.












