ಪುಂಜಾಲಕಟ್ಟೆ: ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪುಂಜಾಲಕಟ್ಟೆ ಇದರ ವಾರ್ಷಿಕ ಸಭೆಯು ಬಂಗ್ಲೆ ಮೈದಾನದಲ್ಲಿ 3ನೇ ವರ್ಷದ ಅಧ್ಯಕ್ಷರ ನೇತೃತ್ವದಲ್ಲಿ ಜರಗಿತು.
ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು. ಗೌರವಾಧ್ಯಕ್ಷರಾಗಿ ಎಂ. ತುಂಗಪ್ಪ ಬಂಗೇರ ಮೂರ್ಜೆ, ಅಧ್ಯಕ್ಷರಾಗಿ ಹರೀಶ್ ಪೂಜಾರಿ ಅನಿಲಡೆ, ಪ್ರಧಾನ ಕಾರ್ಯದರ್ಶಿ ಯೋಗೀಶ್ ಆಚಾರ್ಯ ನೀನ್ಯಾರ್, ಕೋಶಾಧಿಕಾರಿ ಯೋಗೀಶ್ ಪೂಜಾರಿ ಕುಕ್ಕಳ , ಕಾರ್ಯದರ್ಶಿ ಕಿಶೋರ್ ಯಚ್. ಪೂಜಾರಿ ಹಟ್ಟತೋಡಿ, ಹಾಗೂ ಗೌರಿ ಮಹಿಳಾ ಸಮಿತಿಯ ನೂತನ ಸಂಚಾಲಕರಾಗಿ ಗುಣವತಿ ಶೆಟ್ಟಿಗಾರ್ ನಾಕುನಾಡು, ಸಹ ಸಂಚಾಲಕರಾಗಿ ವೀಣಾ ದಿವಾಕರ ಆಚಾರ್ಯ ಪುಂಜಾಲಕಟ್ಟೆ, ಇವರನ್ನು ಸಮಿತಿಯ ಸರ್ವಸದಸ್ಯರುಗಳ ಸಮ್ಮುಖದಲ್ಲಿ ಸರ್ವನುಮಾತದಲ್ಲಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿವಿಧ ಸಹಕರಿಸುವ ಸಂಘ ಸಂಸ್ಥೆಗಳ ಸದಸ್ಯರುಗಳು ಉಪಸ್ಥಿತರಿದ್ದರು..ಆಯ್ಕೆ ಆದ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆಗಳು…













