July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಕ್ಕಡ: ಕೋರಿ ಜಾತ್ರೆಯಲ್ಲಿ ಕೋಣಗಳ ಯಜಮಾನರಿಗೆ ಗೌರವಾರ್ಪಣೆ

ಕೊಕ್ಕಡ: ಡಿ.17 ರಂದು ನಡೆದ ಕೋರಿ ಜಾತ್ರೆಯ ಸಂದರ್ಭದಲ್ಲಿ ಗದ್ದೆಗೆ ಕೋಣಗಳನ್ನು ಇಳಿಸುವ ಸಂಪ್ರದಾಯ ಹಿಂದಿನಿಂದಲೂ ನಡೆಯುತ್ತಾ ಬಂದಿದೆ. ಈ ಬಾರಿಯ ಕೋರಿ ಜಾತ್ರೆಯ ಗದ್ದೆಗೆ ಕಳೆಂಜದ ಹರಿಪ್ರಸಾದ್ ಶೆಟ್ಟಿಯವರ ಕಂಬಳದ ಕೋಣಗಳನ್ನು ಸಂಪ್ರದಾಯದಂತೆ ಮೆರವಣಿಗೆಯಲ್ಲಿ ತಂದು ಗದ್ದೆಗೆ ಇಳಿಸಲಾಯಿತು. ಈಗಿನ ಪರಿಸ್ಥಿತಿಯಲ್ಲಿ ಕೋಣಗಳನ್ನು ಸಾಕುವುದು ಬಹಳ ಕಷ್ಟದ ಕೆಲಸ. ಇಂತಹ ಸಂದರ್ಭದಲ್ಲಿ ಕೋಣಗಳ ಮಾಲಕರಾದ ಹರಿಪ್ರಸಾದ್ ರೈ ರವರಿಗೆ ಕೊಕ್ಕಡದ ಗುತ್ತಿನ ಮನೆಯ ರತ್ನಾಕರ ಭಂಡಾರಿಯವರ ಮನೆಯ ವಠಾರದಲ್ಲಿ ಕಳೆಂಜ ಗ್ರಾಮಸ್ಥರ ಪರವಾಗಿ ಶಾಲು ಹೊದಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಅಧ್ಯಕ್ಷ ಕೆ.ಶ್ರೀಧ‌ರ್ ರಾವ್ ಮತ್ತು ಇತರ ಊರ ಗಣ್ಯರು ಉಪಸ್ಥಿತರಿದ್ದರು.

Related posts

ಬಂಗೇರಕಟ್ಟೆ ಬದ್ರಿಯಾ ಜುಮ್ಮಾ ಮಸ್ಜಿದ್ ನೂತನ ಅಧ್ಯಕ್ಷರಾಗಿ ಇಕ್ಬಾಲ್ , ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್ ಟಿ.ಎಸ್ ಆಯ್ಕೆ

Suddi Udaya

ಕಾಪಿನಡ್ಕ: ಕಾರು ಮತ್ತು ಆಟೋ ನಡುವೆ ಭೀಕರ ರಸ್ತೆ ಅಪಘಾತ-ಹಲವರಿಗೆ ಗಾಯ; ಆಸ್ಪತ್ರೆಗೆ ದಾಖಲು,

Suddi Udaya

ರಾಜ್ಯಮಟ್ಟದ ವಿಜ್ಞಾನ ಸಮಾವೇಶ: ಉಜಿರೆ ಎಸ್.ಡಿ.ಎಂ. ಶಾಲೆಯ ವಿದ್ಯಾರ್ಥಿಗಳ ಎರಡು ತಂಡಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಹಾಗೂ ಶ್ರೀ ಕ್ಷೇತ್ರ ಸೌತಡ್ಕ ಸೇವಾ ಸಮಿತಿ ವತಿಯಿಂದ ಸೂರ್ಯತ್ತಾವು ಸ.ಕಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ

Suddi Udaya

ನಡ: ತಾಲೂಕು ಮಟ್ಟದ ವಿಜ್ಞಾನ ಮೇಳ

Suddi Udaya

ಕಳಿಯ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya
error: Content is protected !!