ಬೆಳ್ತಂಗಡಿ: ದಿವ್ಯಜ್ಯೋತಿ ನವೋದಯ ಸಂಘದ ವಿಶೇಷಚೇತನರಾದ ಸುನಂದ ರವರ ಸಹೋದರ ಪುರಂದರ ರವರು ಅಪಘಾತದಲ್ಲಿ ಮರಣ ಹೊಂದಿದ್ದು, ಇವರಿಗೆ ಚೈತನ್ಯ ವಿಮೆಯಿಂದ ದೊರೆತ 25000 ಮೊತ್ತದ ಚೆಕ್ಕನ್ನು ಪಡಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದ ವ್ಯವಸ್ಥಾಪಕಿ ಸುಕೇಶಿನಿಯವರು ಸುನಂದರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಲಯದ ಪ್ರೇರಕಿ ವನಿತಾ ಉಪಸ್ಥಿತರಿದ್ದರು.







