ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಧರ್ಮಸ್ಥಳದಲ್ಲಿ ಎಲ್ಲಾ ಸಂಘಗಳ ಉದ್ಘಾಟನಾ ಸಮಾರಂಭ ನೆರವೇರಿತು.

ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇಲ್ಲಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಭಟ್ ದೀಪ ಪ್ರಜ್ವಲಿಸಿ ಸಂಘಗಳ ಕಾರ್ಯಗಳಿಗೆ ಚಾಲನೆ ನೀಡಿದರು. ಬಳಿಕ ಶಾಲೆಯ ಒಟ್ಟು ಹತ್ತು ಸಂಘಗಳು ತಮ್ಮ ವಾರ್ಷಿಕ ಯೋಜನೆಗಳನ್ನು ನಾಟಕ, ನೃತ್ಯ, ಕಥೆ, ಕವನ, ಹಾಡು ಇತ್ಯಾದಿ ವಿವಿಧ ಕಲಾಪ್ರಕಾರದ ರೂಪದಲ್ಲಿ ಪ್ರಸ್ತುತಪಡಿಸಿದರು.
ಅತಿಥಿಯಾಗಿ ಆಗಮಿಸಿದ್ದ ಡಾ. ಶ್ರೀಧರ ಭಟ್ ಅವರು ವಿವಿಧ ಸಂಘಗಳ ಯೋಚನೆಗಳನ್ನು ನೋಡಿ ಸಂತಸ ಪಟ್ಟರು.ವಿದ್ಯೆಯ ಮಹತ್ವ,ವಿದ್ಯಾರ್ಥಿಗಳ ಜೀವನದ ಮಹತ್ವ ಮತ್ತು ಅದು ಹೇಗಿರಬೇಕು,ಅಲ್ಪ ಆಹಾರದ ಮಹತ್ವ,ಪರಿಶ್ರಮ ಪಡಬೇಕಾದ ರೀತಿ, ಗುರಿ ಹಾಗೂ ಅದನ್ನು ತಲುಪುವ ದಾರಿ. ಪ್ರಾರ್ಥನೆಯ ಹಿಂದಿನ ಶಕ್ತಿ.ಪರಿಶ್ರಮ ಪಡಬೇಕಾದ ಅಗತ್ಯ, ಅವಕಾಶಗಳ ಸದುಪಯೋಗ, ಸ್ಪರ್ಧಾ ಜಗತ್ತಿನಲ್ಲಿ ವಿದ್ಯಾರ್ಥಿಗಳ ಜೀವನದಲ್ಲಿ ಸಂಘಗಳ ಮಹತ್ವ,ಅದನ್ನು ಉಪಯೋಗಿಸಿಕೊಳ್ಳುವ ರೀತಿ ಇತ್ಯಾದಿಗಳನ್ನು ಹಲವಾರು ಉದಾಹರಣೆಗಳ ಮುಖಾಂತರ ಮಾರ್ಮಿಕವಾಗಿ ವಿವರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ ವಿ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಸಾಕ್ಷಿಗಳಾದರು.












