ನಡ: ಅಗ್ನಿವೀರ್ ಗೆ ಆಯ್ಕೆ ಆಗಿರುವ ನಡ ಗ್ರಾಮದ ಶ್ಯಾಮ್ ಸುಂದರ್ ದಂಪತಿಯ ಪುತ್ರ ರಂಜಿತ್ ನಡ ರವರಿಗೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಕನ್ಯಾಡಿ 1 ಗ್ರಾಮ ಸಮಿತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಾಣಿ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಪ್ರಸಾದ್ ಕಡ್ತಿಯಾರು, ಗ್ರಾಮ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ, ಕಾರ್ಯದರ್ಶಿ ಪ್ರವೀಣ್ ವಿ ಜಿ, ಯುವ ವೇದಿಕೆ ಗ್ರಾಮ ಸಮಿತಿ ಅಧ್ಯಕ್ಷ ಕಿರಣ್ ಕೇಳ್ತಾಜೆ, ಪ್ರಮುಖರಾದ ರೋಹಿತ್ ಕೇಳ್ತಾಜೆ, ಆನಂದ ಗೌಡ ಕೇಳ್ತಾಜೆ, ಜಯಾನಂದ ಗೌಡ ಒಳಗುಡ್ಡೆ, ಬಾಲಕೃಷ್ಣ ಗೌಡ ಪಾದೆ, ಗಣೇಶ್ ಅಂತರ, ಸುಭಾಷ್ ನಡ ಉಪಸ್ಥಿತರಿದ್ದರು.












