August 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪಂ.ಅ. ಅಧಿಕಾರಿ ಜಯಕೀರ್ತಿ ಎಚ್. ಬಿ. ಅವರಿಗೆ ಬಾರ್ಯ. ಗ್ರಾ. ಪಂ. ನಲ್ಲಿ ನುಡಿನಮನ

ಬಾರ್ಯ : ಇತ್ತೀಚಿಗೆ ನಿಧನರಾದ ಬಾರ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಕೀರ್ತಿ ಎಚ್. ಬಿ. ಅವರಿಗೆ ಬಾರ್ಯ ಗ್ರಾಮ ಪಂಚಾಯತ್ ನಲ್ಲಿ ಜೂ.19 ರಂದು ನುಡಿ ನಮನ ಸಲ್ಲಿಸಲಾಯಿತು.

ಜಯಕೀರ್ತಿಯವರ ಅಕಾಲಿಕ ಮರಣ ನೋವು ತಂದಿದೆ. ಒತ್ತಡವನ್ನು ನಿಭಾಯಿಸಿಕೊಂಡು ಕೆಲಸ ಮಾಡಿದ ಅಧಿಕಾರಿ ಅವರು. ಸಿಬ್ಬಂದಿಗಳೊಂದಿಗೆ ಅನ್ಯೋನತೆಯಿಂದ ಕೆಲಸ ಮಾಡುತ್ತಿದ್ದರು, ಸದಕಾಲ ನಗುಮೊಗದ ಸೇವೆ ಸಲ್ಲಿಸಿದ ಅಧಿಕಾರಿಯನ್ನು ಬಾರ್ಯ ಕಳೆದುಕೊಂಡಿದೆ ಎಂದು ಪ್ರಮುಖರು ನುಡಿನಮನ ಸಲ್ಲಿಸಿದರು.

ತಾ. ಪಂ. ಇಓ ಭವಾನಿ ಶಂಕರ್ ಎನ್, ಪುತ್ತಿಲ ಪ್ರೌಢಶಾಲಾ ಮುಖ್ಯ ಶಿಕ್ಷಕ ರಾಧಕೃಷ್ಣ, ಆಡಳಿತಾಧಿಕಾರಿ ಚಂದ್ರಶೇಖರ್, ಬಾರ್ಯ ಪ್ಯಾಕ್ಸ್ ಅಧ್ಯಕ್ಷ ಸೇಷಪ್ಪ ಸಾಲಿಯಾನ್, ಬಾರ್ಯ ಗ್ರಾ. ಪಂ. ನಿಕಟಪೂರ್ವ ಅಧ್ಯಕ್ಷ ಪಿ. ಕೆ. ಉಸ್ಮಾನ್, ಮಾಜಿ ಸದಸ್ಯೆ ಉಷಾ ಶರತ್, ಕಾರ್ಯದರ್ಶಿ ಶೀಲಾ, ಪುತ್ತಿಲ ಪ್ರೌಢಶಾಲಾ ಮುಖ್ಯ ಶಿಕ್ಷಕ ಮಹೇಂದರ್, ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ, ಅರಿವು ಕೇಂದ್ರ ಮೇಲ್ವಿಚಾರಕರು, ವಿಶೇಷ ಚೇತನ ಕಾರ್ಯಕರ್ತೆ, ಕನಸು ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಗ್ರಾಮಸ್ಥರು ಪುಷ್ಪಾ ನಮನ ಸಲ್ಲಿಸಿ ಭಾವುಕರಾದರು.

Related posts

ನಾರಾವಿ: ಸೂರ್ಯನಾರಾಯಣ ಭಜನಾ ಮಂಡಳಿಯ ಅಧ್ಯಕ್ಷರಾಗಿ ನಾರಾಯಣ ಪೂಜಾರಿ, ಪ್ರದಾನ ಕಾರ್ಯದರ್ಶಿ ಯಾಗಿ ಡಾ| ವಿನೋದ. ಪಿ. ಶೆಟ್ಟಿ ಆಯ್ಕೆ

Suddi Udaya

ಚಾರ್ಮಾಡಿ ಘಾಟ್ ನಲ್ಲಿ ಎಳೆನೀರು ತುಂಬಿದ ಪಿಕಪ್ ವಾಹನ ಪಲ್ಟಿ

Suddi Udaya

ಮಹಿಳಾ ಶ್ರಮಿಕರ ಸಂಗಮ – 2026 ಕಾರ್ಯಕ್ರಮ

Suddi Udaya

ವಕೀಲರ ಸಂಘ ಬೆಳ್ತಂಗಡಿ ಇದರ ನೇತೃತ್ವದಲ್ಲಿ ಕ್ಲಾಸಿಕಲ್ ಟೈಗರ್ಸ್ ಧರ್ಮಸ್ಥಳ ಇವರಿಂದ “ಪಿಲಿಗೊಬ್ಬು” ಕಾರ್ಯಕ್ರಮ

Suddi Udaya

ಬಂಟರ ಯಾನೆ ನಾಡವರ ಸಂಘ ಉಜಿರೆ ವಲಯ ಸಮಿತಿ ವತಿಯಿಂದ ಮುಂಡಾಜೆಯ ಶ್ರೀಮತಿ ಗುಣವತಿ ಶೆಟ್ಟಿಯವರ ಗೃಹ ನಿರ್ಮಾಣಕ್ಕೆ ಧನ ಸಹಾಯ

Suddi Udaya

ಬಂದಾರು – ಮೊಗ್ರು ಗ್ರಾಮದ ವಿವಿಧ ಸಂಘ-ಸಂಸ್ಥೆಗಳಿಂದ ಸ್ವಚ್ಚತಾ ಕಾರ್ಯ

Suddi Udaya
error: Content is protected !!