28 C
ಪುತ್ತೂರು, ಬೆಳ್ತಂಗಡಿ
August 5, 2026
ಅಭಿನಂದನೆಆಯ್ಕೆತಾಲೂಕು ಸುದ್ದಿಪ್ರಮುಖ ಸುದ್ದಿ

ಬೆಳ್ತಂಗಡಿ ರೋಟರಿ ಕ್ಲಬ್ಬಿಗೆ ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3181ರ ಪರಮೋಚ್ಛ “ಡೈಮಂಡ್ ಪ್ಲಸ್” ಪ್ರಶಸ್ತಿ

ಬೆಳ್ತಂಗಡಿ: 2025-26ನೇ ಸಾಲಿನಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ತಂಡ, ರೂ. 3.1 ಕೋಟಿ ವೆಚ್ಚದಲ್ಲಿ ನಡೆಸಿದ 492 ಸೇವಾ ಕಾರ್ಯಕ್ರಮಗಳನ್ನು ಗುರುತಿಸಿ, ಜೂ. 20ರಂದು ಮೈಸೂರಿನ ಮೈಸೂರು ಯುನಿಯನ್ ನಲ್ಲಿ ನಡೆದ “ಅನುಬಂಧ ಪ್ರಶಸ್ತಿ ಪ್ರಧಾನ” ಸಮಾರಂಭದಲ್ಲಿ, ರೋಟರಿ ಕ್ಲಬ್ ಅಧ್ಯಕ್ಷ ರೊ. ಡಾ ಪ್ರಕಾಶ ಪ್ರಭು ನೇತೃತ್ವದ ತಂಡವನ್ನು, ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3181ರ ಪರಮೋಚ್ಛ ಪ್ರಶಸ್ತಿಯಾದ “ಡೈಮಂಡ್ ಪ್ಲಸ್” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದರ ಜತೆ ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3181ರ ಅಡಿಯಲ್ಲಿ ಬರುವ ಎಲ್ಲಾ ರೋಟರಿ ಕ್ಲಬ್ ಗಳಿಗಿಂತಲೂ ಅತ್ಯಧಿಕ ಸೇವಾ ಕಾರ್ಯಕ್ರಮಗಳನ್ನು ನಡೆಸಿರುವುದಕ್ಕೆ ಪ್ರಥಮ ಬಹುಮಾನ, IMPACT EXCELLENCE ಪ್ರಶಸ್ತಿ ಮತ್ತು ENGAGEMENT EXCELLENCE ಪ್ರಶಸ್ತಿ ನೀಡಲಾಯಿತು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ಬಿನ ಸದಸ್ಯ ಹಾಗೂ ಎಕ್ಸ್ ಲ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ರೊ. ಪಿ ಎಚ್ ಎಫ್ ಸುಮಂತ ಕುಮಾರ್ ಜೈನ್ ರವರಿಗೆ UNSUNG HERO ಪ್ಪಶಸ್ತಿ, ರೊ. ಮನೋರಮ ಭಟ್ ಅವರಿಗೆ CITATION FOR WOMEN EMPOWERMENT LEADERSHIP ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಕಾರ್ಯಕ್ರಮದಲ್ಲಿ ಅಧ್ಯಕ್ಷ ರೊ. ಡಾ ಪ್ರಕಾಶ ಪ್ರಭು, ಕಾರ್ಯದರ್ಶಿ ಡಾ ಎಂ ಎಂ ದಯಾಕರ್, ರೊ. ಡಾ. ಎ. ಜಯಕುಮಾರ್ ಶೆಟ್ಟಿ, ರೊ ಡಾ. ಶಶಿಧರ್ ಡೋಂಗ್ರೆ, ರೊ ಶ್ರೀಧರ ಕೆ ವಿ, ರೊ. ಡಾ ರಾಘವೇಂದ್ರ ಪಿದಮಲೆ, ರೊ ಅರುಣ ಕುಮಾರ್, ರೊ ಬಿ. ಸೋಮಶೇಖರ ಶೆಟ್ಟಿ ಮತ್ತು ಆ್ಯನ್ ಗೀತಾ ಪ್ರಕಾಶ ಪ್ರಭು ಭಾಗವಹಿಸಿದರು.

Related posts

ಜಿಲ್ಲಾ ಒಕ್ಕಲಿಗರ ಗೌಡರ ಸೇವಾ ಸಂಘಕ್ಕೆ ಬೆಳ್ತಂಗಡಿಯಿಂದ ಐದು ಜನ ಆಯ್ಕೆ

Suddi Udaya

ಶಿಬಾಜೆ ಗ್ರಾ.ಪಂ. ಅರಿವು ಕೇಂದ್ರದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನೆ

Suddi Udaya

ಆರಂಬೋಡಿ: ಅಲ್ ಗೌಸಿಯ ಯಂಗ್ ಮೆನ್ಸ್ ಅಸೋಸಿಯೇಷನ್ ಅಂಗರಕರಿಯ ವತಿಯಿಂದ ಉಚಿತ ಸಾಮೂಹಿಕ ಮಕ್ಕಳ ಸುನ್ನತ್ (ಮುಂಜಿ) ಕಾರ್ಯಕ್ರಮ

Suddi Udaya

ಮಾರ್ಗ ಮಧ್ಯೆ ಕೈಕೊಡುವ ಕೆ.ಎಸ್.ಆರ್.ಟಿ.ಸಿ : ಒಂದೇ ದಿನದಲ್ಲಿ ಆರು ಕಡೆಗಳಲ್ಲಿ ಕೆಟ್ಟು ನಿಂತ ಸಾರಿಗೆ ಬಸ್

Suddi Udaya

ಬೆಳ್ತಂಗಡಿ ರಬ್ಬರ್ ಟ್ಯಾಪರ್ಸ್ ಮತ್ತು ಕೃಷಿ ಮಜ್ದೂರ್ ಸಂಘದ ಸಭೆ: ನೂತನ ಸಮಿತಿ ರಚನೆ

Suddi Udaya

ವಾಣಿ ಕಾಲೇಜಿನಲ್ಲಿ ನಶಾಮುಕ್ತ ಭಾರತ -ಪ್ರತಿಜ್ಞಾವಿಧಿ ಸ್ವೀಕಾರ

Suddi Udaya
error: Content is protected !!