25.1 C
ಪುತ್ತೂರು, ಬೆಳ್ತಂಗಡಿ
August 13, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಹಳೇಪೇಟೆ ಅಲ್ ಅಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

ಉಜಿರೆ : ಮೊಹಿಯುದ್ದೀನ್ ಜುಮಾ ಮಸೀದಿ ಹಳೇಪೇಟೆ, ಉಜಿರೆ ಇದರ ಅಂಗ ಸಂಸ್ಥೆಯಾದ ಅಲ್ ಅಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್, ಹಳೇಪೇಟೆ ಇದರ ಮಹಾಸಭೆಯು ಶುಕ್ರವಾರ ಜುಮಾ ನಮಾಝಿನ ಬಳಿಕ ಮದರಸದ ಹಾಲ್‌ನಲ್ಲಿ ನಡೆಯಿತು.

ಶಾಕಿರ್ ಉಜಿರೆ ದುಆ ನೆರವೇರಿಸುವ ಮೂಲಕ ಸಭೆಗೆ ಚಾಲನೆ ನೀಡಿದರು. ಬಳಿಕ ಅಲ್ ಅಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ಇದರ ಕಾರ್ಯದರ್ಶಿ ಫಝಲ್ ಅವರು ವಾರ್ಷಿಕ ವರದಿಯನ್ನು ಮಂಡಿಸಿದರು. ಬಳಿಕ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಶಾಕಿರ್ ಉಜಿರೆ, ಕಾರ್ಯದರ್ಶಿಯಾಗಿ ಸಹಲ್ ನೀರ್ಸಾಲ್, ಉಪಾಧ್ಯಕ್ಷರಾಗಿ ಅಶ್ರಫ್ ಕುಂಟಿನಿ ಹಾಗೂ ಶಕೀಬ್ ಕುಂಟಿನಿ, ಜೊತೆ ಕಾರ್ಯದರ್ಶಿಯಾಗಿ ಅಲ್ಫಾಝ್ ಕುಂಟಿನಿ ಮತ್ತು ಕೋಶಾಧಿಕಾರಿಯಾಗಿ ಮುಬೀನ್ ಅತ್ತಾಜೆ ಆಯ್ಕೆಯಾದರು.

ಸಲಹೆಗರರಾಗಿ ಮೊಹಿಯುದ್ದೀನ್ ಜುಮಾ ಮಸೀದಿ ಹಳೇಪೇಟೆ, ಉಜಿರೆ ಆಡಳಿತ ಸಮಿತಿಯ ಅಧ್ಯಕ್ಷರು ಅಬೂಬಕ್ಕರ್ ಸುಪ್ರೀಂ, ಕಾರ್ಯದರ್ಶಿ ಹಾರಿಸ್ , ಬಿ.ಎಂ. ಹನೀಫ್ ಮತ್ತು ಹನೀಫ್ ಯು.ಕೆ. ಹಾಗೂ ದಾವೂದ್ ಆಯ್ಕೆಯಾದರು.

ಮಹಾಸಭೆಯಲ್ಲಿ ಕೇಂದ್ರ ಕರಿಯದ ಹಾಗೂ ಉಜಿರೆ, ಕಕ್ಕೇಜಲ್, ಕುಂಟಿನಿ, ಅತ್ತಾಜೆ ಮತ್ತು ಕಕ್ಕಿಯಾನ ಕರಿಯದ ಯಂಗ್ ಮೆನ್ಸ್‌ನ ಸರ್ವ ಸದಸ್ಯರು ಹಾಗೂ ಜಮಾಅತ್‌ನ ಯುವಕರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮೊಹಿಯುದ್ದೀನ್ ಜುಮಾ ಮಸೀದಿ ಹಳೇಪೇಟೆ, ಉಜಿರೆ ಆಡಳಿತ ಸಮಿತಿಯ ಅಧ್ಯಕ್ಷರು ಅಬೂಬಕ್ಕರ್ ಸುಪ್ರೀಂ, ಕಾರ್ಯದರ್ಶಿ ಹಾರಿಸ್ , ಜೊತೆ ಕಾರ್ಯದರ್ಶಿ ಹಂಝ, ಸದಸ್ಯ ಕಾದರ್ ಎಸ್.ಎ, ಕೋಶಾಧಿಕಾರಿ ಮೊಹಮ್ಮದ್ ಸಅದಿ ಉಪಸ್ಥಿತರಿದ್ದರು.

Related posts

ಸುಲ್ಕೇರಿ ಗ್ರಾ.ಪಂ. ನಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಭಟನೆ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದ ಪಾಲನಾ ಸಮಿತಿಯಿಂದ ನೂತನವಾಗಿ ಆಯ್ಕೆಗೊಂಡ ಧರ್ಮಾಧ್ಯಕ್ಷರಿಗೆ ಸ್ವಾಗತ

Suddi Udaya

ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ ಮಣ್ಣಿನ ಹರಕೆ ಖ್ಯಾತಿಯ ಸುರ್ಯ ದೇವಸ್ಥಾನಕ್ಕೆ ಭೇಟಿ

Suddi Udaya

ಬೆಳ್ತಂಗಡಿ: ದೀಪಾವಳಿ ಹಬ್ಬದ ಪ್ರಯುಕ್ತ ಆಧಿನಾಥ್ ಬಜಾಜ್‌ನಲ್ಲಿ ಗ್ರಾಹಕರಿಗೆ ವಿಶೇಷ ಆಫರ್

Suddi Udaya

ಕುವೆಟ್ಟು ಸ.ಉ.ಪ್ರಾ.ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ವೇಣೂರು ಯುವ ಸೇವಾ ಸಂಗಮ ಸೇವಾ ಟ್ರಸ್ಟ್ ನ ಆಮಂತ್ರಣ ಬಿಡುಗಡೆ

Suddi Udaya
error: Content is protected !!