June 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಯುವವಾಹಿನಿ ವೇಣೂರು ಘಟಕದ ವಿನೂತನ ಯೋಜನೆ “ಬೆಳಕು” ಕಾರ್ಯಕ್ರಮ

ವೇಣೂರು : ಯುವವಾಹಿನಿ ವೇಣೂರು ವಿನೂತನ ಯೋಜನೆ “ಬೆಳಕು” ಕಾರ್ಯಕ್ರಮ ಜೂ.26 ರಂದು ಪೇರಿ – ಹೊಸಂಗಡಿ ಶ್ರೀ ಶಾರದಾಂಭ ಭಜನಾ ಮಂದಿರದಲ್ಲಿ ನಡೆಯಿತು. ಸಭೆಯು ಮೊದಲಿಗೆ ಪ್ರಾರ್ಥನೆಯೊಂದಿಗೆ ಆರಂಭಗೊಂಡು ನಂತರ ಸದಸ್ಯತ್ವ ಮತ್ತು ಆಸರೆ ಯೋಜನೆಯ ಬಗ್ಗೆ ಚರ್ಚಿಸಿ ಬಡ ಕುಟುಂಬದ ವಿದ್ಯಾರ್ಥಿಗೆ ಸಹಾಯಧನ ಕೊಡುವುದುದೆಂದು ನಿರ್ಧರಿಸಲಾಯಿತು.

ಘಟಕದ ಕೋಶಾಧಿಕಾರಿ ಸತೀಶ್ ಚಿಗುರು ಇವರ ಪ್ರಾಯೋಜಕತ್ವದಲ್ಲಿ ಕೊಡಮಾಡಲ್ಪಟ್ಟ ಶ್ರೀಮತಿ ಬೇಬಿ ಪೇರಿ -ಹೊಸಂಗಡಿ ಬೆಳ್ತಂಗಡಿ ತಾಲೂಕು ಇವರ ಮನೆಗೆ ಉಚಿತ ವಿದ್ಯುತ್ ಸಂಪರ್ಕಕ್ಕೆ ಘಟಕದ ಅಧ್ಯಕ್ಷ ಪ್ರಕಾಶ್ ಕೋಟ್ಯಾನ್ ನಾರಾವಿ, ಕಾರ್ಯದರ್ಶಿ ಶ್ರೀಮತಿ ದಕ್ಷಾ ಅಂಬಲಾ ಅಂಡಿಂಜೆ, ಮಾಜಿ ಅಧ್ಯಕ್ಷರುಗಳಾದ ನಿತೀಶ್ ಹೆಚ್, ನವೀನ್ ಪಚ್ಚೇರಿ, ಅರುಣ್ ಕೋಟ್ಯಾನ್, ಶುಭಕರ ಪೂಜಾರಿ ಸಾವ್ಯ ಮತ್ತು ವೇಣೂರು ಬಿಲ್ಲವ ಸಂಘದ ಅಧ್ಯಕ್ಷರಾದ ಹರೀಶ್ ಕುಮಾರ್ ಪೊಕ್ಕಿ, ಘಟಕದ ಸಲಹೆಗರಾದ ರಾಕೇಶ್ ಮೂಡುಕೋಡಿ, ಪೇರಿ -ಹೊಸಂಗಡಿ ಶ್ರೀ ಶಾರದಾಂಭ ಭಜನ ಮಂದಿರದ ಅಧ್ಯಕ್ಷರಾದ ಆನಂದ್ ಬಂಗೇರ ಮತ್ತು ಕಾರ್ಯದರ್ಶಿ ಸುಜಿತ್ ಕುಮಾರ್ , ಸದಸ್ಯರಾದ , ರಶ್ಮಿ ಹರಿಪ್ರಸಾದ್, ಘಟಕದ ಪ್ರವೀಣ್ ಕೋಟ್ಯಾನ್ ನಾರಾವಿ, , ಮಹಿಳಾ ನಿರ್ದೇಶಕರುಗಳಾದ ಗುಣವತಿ ಡಿ, ಜಯಂತಿ, ಸಂಗಮ್ ಪೇರಿ, ಸೂರಜ್ ಪೇರಿ, ಅಂಕಿತ್ ಬಂಗೇರ ಕೊಡಿಂಗೇರಿ, ಬಾಬು ಕೋಟ್ಯಾನ್, ಸನತ್, ಸಂದೀಪ್, ಸಂದೇಶ್ ಹಾಗೂ ಪದಾಧಿಕಾರಿಗಳ ಉಪಸ್ಥಿತಿ ಯಲ್ಲಿ ಚಾಲನೆಯನ್ನು ನೀಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

ಘಟಕದ ಕೋಶಾಧಿಕಾರಿ ಸತೀಶ್ ಚಿಗುರು ಇವರನ್ನು ಪೇರಿ -ಹೊಸಂಗಡಿ ಶ್ರೀ ಶಾರದಾಂಭ ಭಜನ ಮಂದಿರದ ಪರವಾಗಿ ಸನ್ಮಾನಿಸಲಾಯಿತು.

ಘಟಕದ ವ್ಯಕ್ತಿತ್ವ ವಿಕಾಸನ ನಿರ್ದೇಶಕರಾದ ಸುಜಿತ್ ಕುಮಾರ್ ಸ್ವಾಗತಿಸಿ, ಘಟಕದ ಕಾರ್ಯದರ್ಶಿ ಶ್ರೀಮತಿ ದಕ್ಷಾ ಅಂಬಲ ಧನ್ಯವಾದವಿತ್ತರು.

Related posts

ಅಳದಂಗಡಿ ಪ್ರಾದ್ವಿ ಚಾಲೆಂಜರ್ಸ್ ಅರ್ವ ಮತ್ತು ನಮ್ಮ ಜವನೆರ್ ಹವ್ಯಾಸಿ ಕ್ರೀಡಾ ತಂಡದಿಂದ ಕೆಸರ್ದ ಗೊಬ್ಬು : ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಉಜಿರೆ : ಬೆನಕ ಹೆಲ್ತ್ ಸೆಂಟರ್ ವತಿಯಿಂದ ಬದನಾಜೆ ಸ.ಉ.ಪ್ರಾ. ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ರಾಜ್ಯಾದಾದ್ಯಂತ ಬಾಂಬೆ ಮಿಠಾಯಿ ನಿಷೇಧ: ಆರೋಗ್ಯ ಸಚಿವರಿಂದ ಅಧಿಕೃತ ಆದೇಶ – ಇನ್ಮುಂದೆ ಮಾರಾಟ ಮಾಡಿದ್ರೆ ದಂಡ, ಜೈಲು ಶಿಕ್ಷೆ

Suddi Udaya

ಯಶೋಧ ಕೃಷ್ಣ ವೀಡಿಯೋ ಸ್ಪರ್ಧೆ: ಕಲ್ಮಂಜದ ರಿದ್ವಿ ಡಿ.ಆರ್ ಹಾಗೂ ಭಕ್ತಿ ಜಿ. ವಿನ್ನರ್

Suddi Udaya

ಕುರಾಯ ಶ್ರೀ ಸದಾಶಿವ ದೇವರ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವ:ಗೊನೆ ಮುಹೂರ್ತ, ಧ್ವಜಾರೋಹಣ

Suddi Udaya

ಬೆಳ್ತಂಗಡಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ವತಿಯಿಂದ 78ನೇ ವಷ೯ದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!