24.1 C
ಪುತ್ತೂರು, ಬೆಳ್ತಂಗಡಿ
June 29, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾರಾವಿಯಲ್ಲಿ ಸರ್ವಧರ್ಮೀಯರ ಸಮಾವೇಶ

ನಾರಾವಿ: ಸತ್ಯ, ಅಹಿಂಸೆ, ಬದುಕು ಮತ್ತು ಬದುಕಲು ಬಿಡು. ಪರಸ್ಪರೋಪಗ್ರಹೋಜೀವಾನಾಂ – ಇದು ಜೈನಧರ್ಮದ ಸಾರವಾಗಿದೆ. ಜೀವನವಿಡೀ ಅಹಿಂಸಾಧರ್ಮದ ಪಾಲನೆಯೊಂದಿಗೆ ಶಿಸ್ತಿನ ಸಿಪಾಯಿಯಾಗಿ, ಧರ್ಮಾನುರಾಗಿಯಾಗಿ, ವೃತ-ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸರ್ವಧರ್ಮಿಯರಿಗೂ ಬಹುಮುಖಿ ಸಮಾಜಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದ ದಿವಂಗತ ಎನ್. ಪ್ರೇಮ್‌ಕುಮಾರ್ ಹೊಸ್ಮಾರ್ ಆದರ್ಶ ಶ್ರಾವಕರತ್ನವಾಗಿ ಮೆರೆದವರು ಎಂದು ನರಸಿಂಹರಾಜಪುರ ಬಸ್ತಿಮಠದ ಪೂಜ್ಯ ಲಕ್ಷ್ಮೀ ಸೇನ ಭಟ್ಟಾರಕ ಸ್ವಾಮೀಜಿ ಹೇಳಿದರು.

ಇತ್ತೀಚೆಗೆ ನಿಧನರಾದ ಹೊಸ್ಮಾರಿನ ಉದ್ಯಮಿ ಹಾಗೂ ಆದರ್ಶ ಸಮಾಜಸೇವಕ ಎನ್. ಪ್ರೇಮ್‌ಕುಮಾರ್ ಸ್ಮರಣಾರ್ಥವಾಗಿ ಭಾನುವಾರ ನಾರಾವಿಯಲ್ಲಿ ಸೂರ್ಯನಾರಾಯಣ ದೇವಸ್ಥಾನದ ಸಭಾಭವನದಲ್ಲಿ ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಆಯೋಜಿಸಿದ ಸರ್ವಧರ್ಮೀಯರ ಸಮಾವೇಶದಲ್ಲಿ ಅವರು ವಿನಯಾಂಜಲಿ ಸಲ್ಲಿಸಿ ಮಂಗಲಪ್ರವಚನದೊಂದಿಗೆ ಆಶೀರ್ವಚನ ನೀಡಿದರು.

ಶಾಶ್ವತ ಧರ್ಮಕಾರ್ಯಗಳನ್ನು ಮಾಡಿದಾಗ ನಮ್ಮ ಜೀವನ ಸಾರ್ಥಕ ಹಾಗೂ ಪರಿಪೂರ್ಣ ಅಗುತ್ತದೆ. ಜೈನಧರ್ಮದ ಪ್ರಕಾರ ದೇಹಕ್ಕೆ ಮಾತ್ರ ಸಾವು, ಆತ್ಮನಿಗೆ ಸಾವಿಲ್ಲ. ದಾನ-ಧರ್ಮಾದಿ ಸತ್ಕಾರ್ಯಗಳಿಂದ ಆತ್ಮನಿಗಂಟಿದ ಪಾಪಕರ್ಮಗಳ ಕೊಳೆ ಕಳೆದಾಗ ಪುಣ್ಯಸಂಚಯವಾಗಿ ಆತ್ಮನೇ ಪರಮಾತ್ಮನಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ. ಪ್ರೇಮ್‌ಕುಮಾರ್ ಅವರ ಆದರ್ಶ ಸೇವಾಕಾರ್ಯಗಳನ್ನು ನಾವೆಲ್ಲರೂ ಮುಂದುವರಿಸುವುದೇ ಅವರಿಗೆ ಸಲ್ಲಿಸುವ ವಿನಯಾಂಜಲಿಯಾಗಿದೆ. ಅವರ ಹೆಸರಿನಲ್ಲಿ ಗಿಡ-ಮರಗಳನ್ನು ಬೆಳೆಸಬೇಕು. ಯಾವುದಾದರೂ ಶಾಶ್ವತ ಸೇವಾಕಾರ್ಯವನ್ನು ಅನುಷ್ಠಾನಗೊಳಿಸಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ಡಾ. ಪ್ರಸಾದಶೆಟ್ಟಿ ನಾರಾವಿ ಮಾತನಾಡಿ, ಸರ್ವರಿಗೂ ಆಪಾತ್ಭಾಂಧವರಾಗಿ, ಹೃದಯಶ್ರೀಮಂತಿಕೆಯೊಂದಿಗೆ ಸರ್ವಧರ್ಮೀಯರಿಗೂ ಪ್ರೇಮ್‌ಕುಮಾರ್ ಮಾಡಿದ ಸೇವಾ ಕಾರ್ಯಗಳು ಸರ್ವರಿಗೂ ಆದರ್ಶ ಹಾಗೂ ಅನುಕರಣೀಯವಾಗಿದೆ ಎಂದರು. ಅವರು ಮಾನವೀಯತೆಯ ಸೇವೆಯಿಂದ ಅಮರರಾಗಿದ್ದಾರೆ ಎಂದು ಹೇಳಿದರು.

ನಾರಾವಿ ಸಂತ ಅಂತೋನಿ ಚರ್ಚ್ನ ಧರ್ಮಗುರುಗಳಾದ ವಂದನೀಯ ಫಾದರ್ ಜೆರೋಂ ಡಿ’ಸೋಜ ಮಾತನಾಡಿ, ಚರ್ಚ್ ಶಾಲೆಯ ಹಿರಿಯ ವಿದ್ಯಾರ್ಥಿಯಾಗಿದ್ದ ಪ್ರೇಮ್‌ಕುಮಾರ್, ಚರ್ಚ್ ಹಾಗೂ ಶಾಲೆಗೆ ನೀಡಿದ ಸೇವೆಯನ್ನು ಸ್ಮರಿಸಿದರು.
ಮೂಡಬಿದ್ರೆಯ ಕೆ. ಅಭಯಚಂದ್ರ ಜೈನ್ ಮಾತನಾಡಿ, ಬಸದಿಗಳು, ಮಠ-ಮಂದಿರಗಳು, ಮಸೀದಿಗಳು, ಚರ್ಚ್ಗಳಿಗೆ ಪ್ರೇಮ್‌ಕುಮಾರ್ ನೀಡಿದ ಸೇವೆಯನ್ನು ಶ್ಲಾಘಿಸಿದರು.

ಸೋಲೂರು ಮಠದ ವಿಖ್ಯಾತಾನಂದ ಸ್ವಾಮೀಜಿ, ಶಾಸಕ ಸುನಿಲ್ ಕುಮಾರ್, ಕಾರ್ಕಳದ ಶೇಖರ ಮಡಿವಾಳ, ರವೀಂದ್ರ ಶೆಟ್ಟಿ, ವಕೀಲ ಮುರಳೀಧರ ಭಟ್, ಶ್ರೀರಂಗ ಮಯ್ಯ ಮತ್ತು ನಿವೃತ್ತ ಮುಖೋಪಾಧ್ಯಾಯ ಮುನಿರಾಜ ರೆಂಜಾಳ ಮಾತನಾಡಿದರು.
ಬೆಂಗಳೂರಿನ ದಿಶಾ ಬಳ್ಳಾಲ್ ಸ್ವಾಗತಿಸಿದರು. ವಿಜಯ ಕುಮಾರ್ ನೂರಾಳಬೆಟ್ಟು ಧನ್ಯವಾದವಿತ್ತರು.

ದಿ. ಪ್ರೇಮ್‌ಕುಮಾರ್ ಕುಟುಂಬಸ್ಥರು ಹಾಗೂ ಹಾಸನದ ಡಾ. ಆದರ್ಶ ಮತ್ತು ಡಾ. ಪ್ರತಿಮಾ ಉಪಸ್ಥಿತರಿದ್ದರು.
ಸೂರ್ಯನಾರಾಯಣ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಅಲಂಕಾರ ಪೂಜೆ ನಡೆಯಿತು.

Related posts

ಚಾರ್ಮಾಡಿ ಘಾಟ್‌ನಲ್ಲಿ ದುರ್ಘಟನೆ – ಯುವಕ ಪ್ರಪಾತಕ್ಕೆ ಬಿದ್ದು ಗಂಭೀರ ಗಾಯ: ಹೈವೇ ಪಟ್ರೊಲ್ ಸಿಬ್ಬಂದಿ ಗಳಿಂದ ರಕ್ಷಣೆ

Suddi Udaya

ಆಕಾಂಕ್ಷ ಸಾವು ಪ್ರಕರಣಕ್ಕೆ ಹೊಸ ತಿರುವು; ಪೊಲೀಸರಿಂದ ಮೋಸದ ಆರೋಪ: ಇನ್ನೂ ನಡೆಯದ ಮರಣೋತ್ತರ ಪರೀಕ್ಷೆ

Suddi Udaya

ಹುಣ್ಸೆಕಟ್ಟೆ ಶ್ರೀ ರಾಮ ಭಜನಾ ಮಂಡಳಿ ವತಿಯಿಂದ ವಿಜಯರತ್ನ ಪ್ರಶಸ್ತಿ ಪುರಸ್ಕೃತ ಸುಮಂತ್ ಕುಮಾರ್ ಜೈನ್ ರವರಿಗೆ ಅಭಿನಂದನೆ

Suddi Udaya

ಉಜಿರೆ ಎಸ್.ಡಿ.ಎಮ್ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಶಾಲಾ ವಿದ್ಯಾರ್ಥಿಗಳಿಗೆ ‘ಮ್ಯೂಸಿಯಂ ಆನ್ ವೀಲ್’ ಕಾರ್ಯಾಗಾರ

Suddi Udaya

ಮೇಲಂತಬೆಟ್ಟು ಕಲ್ಲಿನ‌ ಕೋರೆ ಪ್ರಕರಣಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ; ಜು.8 ಮಾರಿಗುಡಿ ಕ್ಷೇತ್ರದಲ್ಲಿ ಪ್ರಮಾಣ; ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿ ಹೇಳಿಕೆ

Suddi Udaya

ಬೆಳಾಲು: ಕೊಯ್ಯೂರು ಅರಣ್ಯದಲ್ಲಿ ಬೆಂಕಿ

Suddi Udaya
error: Content is protected !!