24.7 C
ಪುತ್ತೂರು, ಬೆಳ್ತಂಗಡಿ
August 13, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಬಂಗೇರ ಬ್ರಿಗೇಡ್ ವೇಣೂರು ವ್ಯಾಪ್ತಿಯ ಸಮಿತಿ ರಚನೆ: ಅಧ್ಯಕ್ಷರಾಗಿ ಬಾಲಕೃಷ್ಣ ಭಟ್, ಪ್ರ. ಕಾರ್ಯದರ್ಶಿಯಾಗಿ ಲಕ್ಷ್ಮಣ ಪೂಜಾರಿ

ಬೆಳ್ತಂಗಡಿ: ಬಂಗೇರ ಬ್ರಿಗೇಡ್ ವೇಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಮಿತಿ ರಚನಾ ಸಭೆಯು ಬಂಗೇರ ಬ್ರಿಗೇಡ್ ಬೆಳ್ತಂಗಡಿ ಇದರ ಅಧ್ಯಕ್ಷೆ ಬಿನುತಾ ಬಂಗೇರ ಇವರ ಅಧ್ಯಕ್ಷತೆಯಲ್ಲಿ ವೇಣೂರು ಲಯನ್ಸ್ ಭವನದಲ್ಲಿ ಜೂ.27 ರಂದು ನಡೆಯಿತು.

ವೇದಿಕೆಯಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ವಿಜಯ ಗೌಡ, ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ವೇಣೂರು ವಲಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಪ್ರಭಾಕರ ಹೆಗ್ಡೆ ಹಟ್ಟಾಜೆ ಗುತ್ತು, ಬೆಳ್ತಂಗಡಿ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸತೀಶ್ ಹೆಗ್ಡೆ, ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ಹಿಂದುಳಿದ ವಿಭಾಗದ(ನಗರ) ಅಧ್ಯಕ್ಷ ದಯಾನಂದ ದೇವಾಡಿಗ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಿಕ್ಟರ್ ಮಿನೇಜಸ್, ಬಂಗೇರ ಬ್ರಿಗೇಡ್ ನ ಪ್ರ.ಕಾರ್ಯದರ್ಶಿ ಸಲೀಂ ಗುರುವಾಯನಕೆರೆ, ಉಪಾಧ್ಯಕ್ಷ ಅನೂಪ್ ಬಂಗೇರ,ಪ್ರಗತಿ ಪರ ಕೃಷಿಕ ಚಂದಪ್ಪ ಮೂಲ್ಯ ಉಪಸ್ಥಿತರಿದ್ದರು.

ಸಾಮಾಜಿಕ ಕಾರ್ಯಕರ್ತ ಹೊನ್ನಯ್ಯ ಕಾಟಿಪಳ್ಳ ಮತ್ತು ಝಾಕ್ರಿಯಾ ವಸಂತ ಬಂಗೇರರ ಉಪಕಾರ ಸ್ಮರಣೆಯನ್ನು ಶ್ಲಾಘಿಸಿ ಬ್ರಿಗೇಡ್ ಸಂಘಟನೆಗೆ ಶುಭ ಹಾರೈಸಿದರು.

ಬಂಗೇರ ಬ್ರಿಗೇಡ್ ವೇಣೂರು ಇದರ ಅಧ್ಯಕ್ಷರಾಗಿ ಬೆಳ್ತಂಗಡಿ ಆರಾಧನಾ ಸಮಿತಿಯ ಸದಸ್ಯರಾಗಿರುವ ಬಾಲಕೃಷ್ಣ ಭಟ್ ಕಾಮೆಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಮೂಡುಕೋಡಿ ಹಾಲು ಉತ್ಪಾದಕ ಸಹಕಾರಿ ಸಂಘದ ನಿರ್ದೇಶಕ ಲಕ್ಷ್ಮಣ ಪೂಜಾರಿ ಅರ್ಬು ಮೂಡುಕೋಡಿ, ಕೋಶಾದಿಕಾರಿಯಾಗಿ ಮಾಜಿ ಗ್ರಾಮ ಪಂ ಸದಸ್ಯಮುಸ್ತಾಫ್ ಮೂಡುಕೋಡಿ, ಉಪಾಧ್ಯಕ್ಷರಾಗಿ ವಿಕ್ಟರ್ ಮಿನೇಜಸ್,ಚಂದಪ್ಪ ಮೂಲ್ಯ, ಝಾಕ್ರಿಯಾ ಮೂಡುಕೋಡಿ, ,ಸುಕುಮಾರ್ ಜೈನ್, ಕೃಷ್ಣಪ್ಪ ಪೂಜಾರಿ ವೇಣೂರು, ಜೊತೆ ಕಾರ್ಯದರ್ಶಿ ಆಲ್ವಿನ್ ಡಿಸೋಜ,ಅಶ್ಫಾಕ್ ವೇಣೂರು, ಪ್ರವೀಣ್ ಪೂಜಾರಿ ಹೊಸಪಟ್ನ, ಸಾಮಾಜಿಕ ಜಾಲ ತಾಣಸಮಿತಿ ಸಂಚಾಲಕರಾಗಿ ನ್ಯಾಯವಾದಿ ಸತೀಶ್ ಪಿ. ಎನ್, ಅರುಣ್ ಕೋಟ್ಯಾನ್ ಮೂಡುಕೋಡಿ,ಸಂಘಟನಾ ಕಾರ್ಯದರ್ಶಿಗಳಾಗಿ ಗಣೇಶ್ ದೇವಾಡಿಗ, ಶ್ರೀಧರ ಆಚಾರ್ಯ ಮೂಡುಕೋಡಿ, ಸುಂದರ ಪೂಜಾರಿ ಮೂಡುಕೋಡಿ, ರವೀಂದ್ರ ಪೂಜಾರಿ ಮೂಡುಕೋಡಿ, ಮಹಿಳಾ ಸಂಚಾಲಕರಾಗಿ ಕಮಲ ಶಿವಾಜಿ ನಗರ,ಶೋಭಾ ಮೂಡುಕೋಡಿ,ಕುಸುಮಾವತಿ ಗೌಡ ಮೂಡುಕೋಡಿ ಸಲಹೆಗಾರರಾಗಿ ಪ್ರಭಾಕರ ಹೆಗ್ಡೆ ಬಜಿರೆ, ಗಣೇಶ್ ನಾರಾಯಣ ಪಂಡಿತ್,ವಿಜಯ ಗೌಡ,ನಾರಾಯಣ ಪೂಜಾರಿ ಮೂಡುಕೋಡಿ, ಸತೀಶ್ ಹೆಗ್ಡೆ ಬಜಿರೆ,ಅರವಿಂದ ಶೆಟ್ಟಿ,ದಯಾನಂದ ದೇವಾಡಿಗ ವೇಣೂರು ,ರತ್ನರಾಜಬಂಗ ಹೊಸಮನೆ ಮೂಡುಕೋಡಿ,ಯೋಗೀಶ್ ಬಿಕ್ರೊಟ್ಟು ಮೂಡುಕೋಡಿ , ಸದಸ್ಯರಾಗಿ ಶಿವಪ್ಪ ವೇಣೂರು, ರಾಜು ಶಿವಾಜಿನಗರ,ಯೋಗೇಂದ್ರ ಶಿವಾಜಿ ನಗರ,ರಾಜೇಶ್ ವೇಣೂರು, ಮೋನಪ್ಪ ಕುಲಾಲ್,ವಿಶ್ವನಾಥ ಮಡಿವಾಳ, ಆನಂದ ಪೂಜಾರಿ ಕರಿಮಣೀಲು, ಸತೀಶ್ ಪೂಜಾರಿ ಮೂಡುಕೋಡಿ,ಗೋಪಾಲಗೌಡ ಮೂಡುಕೋಡಿ, ಕೊರಗಪ್ಪ ನಲಿಕೆ ಮೂಡುಕೋಡಿ, ಹನೀಫ್ ಕೊಪ್ಪದಬಾಕಿಮಾರು,ಶೇಖರ ಪೂಜಾರಿ ಸುವಿಧಾ ಬಜಿರೆ ಆಯ್ಕೆಯಾದರು.

ಬಂಗೇರ ಬ್ರಿಗೇಡ್ ನ ಜೊತೆ ಕಾರ್ಯದರ್ಶಿ ರಾಕೇಶ್ ಸ್ವಾಗತಿಸಿ ,ನಿರೂಪಿಸಿ ಕಾರ್ಯಕಾರಿ ಸಮಿತಿ ಸದಸ್ಯ ಜಯಾನಂದ ಲಾಯಿಲ ವಂದಿಸಿದರು.

Related posts

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ನಾಮನಿರ್ದೇಶಿತ ಸದಸ್ಯರಾಗಿ ಮಿತ್ತಬಾಗಿಲು ಗ್ರಾ.ಪಂ. ಅಧ್ಯಕ್ಷ ವಿನಯಚಂದ್ರ ಗೌಡ ಆಯ್ಕೆ

Suddi Udaya

ವೇಣೂರು ಮಹಾಮಸ್ತಕಾಭಿಷೇಕ ಮಹೋತ್ಸವ- ಕಾರ್ಯಾಲಯ ಉದ್ಘಾಟನೆ, ವೆಬ್‌ಸೈಟ್ ಅನಾವರಣ

Suddi Udaya

ತುಮಕೂರು ಜಿಲ್ಲೆಯ ಕ್ಯಾತಸಂದ್ರಲ್ಲಿ ನಡೆದ ಗಣಪತಿ ಶೋಭಯಾತ್ರೆಯಲ್ಲಿ ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ತಂಡ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ

Suddi Udaya

ಅರಸಿನಮಕ್ಕಿಯಿಂದ ಶಿಶಿಲ ರಸ್ತೆ ಬದಿಯಲ್ಲಿರುವ ಅಪಾಯಕಾರಿ ವಿದ್ಯುತ್ ಕಂಬಗಳ ತೆರವು

Suddi Udaya

ಕಲ್ಮಂಜ : ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ ಕಾರ್ಯಾರಂಭ

Suddi Udaya
error: Content is protected !!