ಉಜಿರೆ: ಜೂ.29ರಂದು ಸುರಿದ ಭಾರೀ ಮಳೆಗೆ ಉಜಿರೆಯಿಂದ ಗುರಿಪಳ್ಳ, ಇಂದಬೆಟ್ಟು, ಬಂಗಾಡಿ ಸಂಪರ್ಕಿಸುವ ಗುರಿಪಳ್ಳದ ಅಂಬಡಬೆಟ್ಟು ಕಿರುಸೇತುವೆಯ ನದಿಯು ತುಂಬಿ ಹರಿದಿದ್ದು, ನಿರ್ಮಾಣ ಹಂತದಲ್ಲಿ ಇರುವ ಅಂಬಡಬೆಟ್ಟು ಕಿರುಸೇತುವೆಯ ಕಾಮಗಾರಿಗೆ ಇರಿಸಿದ್ದ ಕೆಲ ಕಬ್ಬಿಣದ ಸಲಕರಣೆಗಳು ಕೊಚ್ಚಿಕೊಂಡು ಹೋಗಿರುವ ಬಗ್ಗೆ ವರದಿಯಾಗಿದೆ.
ಕಳೆದ ಕೆಲ ತಿಂಗಳುಗಳ ಹಿಂದೆ ಸೇತುವೆಯ ಕಾಮಗಾರಿ ಪ್ರಾರಂಭಗೊAಡಿದ್ದು, ತಾತ್ಕಲಿಕವಾಗಿ ಪಕ್ಕದಲ್ಲೇ ಬದಲಿ ರಸ್ತೆಯನ್ನು ನಿರ್ಮಾಣ ಮಾಡಲಾಗಿತ್ತು. ಈ ತಾತ್ಕಾಲಿಕ ರಸ್ತೆಯು ಜೂನ್ ತಿಂಗಳ ಮೊದಲ ವಾರದಲ್ಲಿ ಸುರಿದ ಭಾರೀ ಮಳೆಗೆ ಕೊಚ್ಚಿ ಹೋದ ಪರಿಣಾಮ ರಸ್ತೆ ಸಂರ್ಪಕವು ಕಡಿತಗೊಂಡಿತ್ತು. ಬಳಿಕ ಸ್ಥಳೀಯ ನಾಯಕರುಗಳ ಸ್ಪಂದನೆಯಿAದ ತಾತ್ಕಾಲಿಕ ರಸ್ತೆಗೆ ಮರುಜೀವ ಬಂತಾದರೂ ಸಹ ಜೂ.9ರಿಂದ 2027ರ ಜನವರಿ ವರೆಗೆ ದ.ಕ. ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಅವರ ಆದೇಶದ ಮೇರೆಗೆ ಸಂಚಾರ ಮಾರ್ಗ ಬದಲಾವಣೆಯನ್ನು ಮಾಡಲಾಯಿತು.













