ವೇಣೂರು: ಯುವ ಸೇವಾ ಸಂಗಮ ಸೇವಾ ಟ್ರಸ್ಟ್ ವೇಣೂರು ಇದರ ವತಿಯಿಂದ ಸುಲ್ಕೇರಿ ಶ್ರೀರಾಮ ಶಾಲೆಗೆ ಕಟ್ಟಡವನ್ನು ಕಟ್ಟಲು ಸಿಮೆಂಟ್ ಗೆ ರೂ.1 ಲಕ್ಷವನ್ನು ದೇಣಿಗೆಯಾಗಿ ಯುವ ಸೇವಾ ಸಂಗಮ ಅಧ್ಯಕ್ಷ ಕೆ. ವಿಜಯ ಗೌಡ, ಕಾರ್ಯದರ್ಶಿ ಯೋಗೀಶ್ ಬಿಕ್ರೊಟ್ಟು, ಕೋಶಾಧಿಕಾರಿ ಪ್ರಶಾಂತ್ ಹೆಗ್ಡೆ ಹಾಗೂ ಫೌಂಡರ್ ಟ್ರಸ್ಟಿಗಳ ಸಮ್ಮುಖದಲ್ಲಿ ಶ್ರೀರಾಮ ಶಾಲೆಯ ಸಂಚಾಲಕರಿಗೆ ನೀಡಲಾಯಿತು.








