ಅಳದಂಗಡಿ: ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಸುಲ್ಕೇರಿಮೊಗ್ರು. ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ ಸುಲ್ಕೇರಿಮೊಗ್ರು ಇದರ ಸಂಘದ ಸದಸ್ಯರು ಜೂ.28ರಂದು ಅಳದಂಗಡಿಯ ಜ್ಞಾನಮಾರ್ಗದ ಬಳಿಯಿಂದ ಸುಲ್ಕೇರಿಮೊಗ್ರುವರೆಗೆ ರಸ್ತೆ ಬದಿಯನ್ನು ಶ್ರಮದಾನದ ಮೂಲಕ ದುರಸ್ತಿಗೊಳಿಸಿದರು.

ಶ್ರಮದಾನದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದರು. ಬೆಳಗ್ಗಿನ ಉಪಹಾರವನ್ನು ಗುರುವಪ್ಪ ಪೂಜಾರಿ ಪಟ್ಲ ನೀಡಿದರು. ಸಂಘದ ಅಧ್ಯಕ್ಷ ಸಂಕೇತ್ ಬಂಗೇರ ಸ್ವಾಗತಿಸಿ, ಕಾರ್ಯದರ್ಶಿ ವಿಜಯಕುಮಾರ್ ಧನ್ಯವಾದವಿತ್ತರು.













