ಬೆಳ್ತಂಗಡಿ: ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆ ಮಡಂತ್ಯಾರು ವಲಯ ಇದರ ಸಭೆಯು ಜೂ. 28 ರಂದು ಬಳ್ಳಮಂಜ ಸಮುದಾಯ ಭವನದಲ್ಲಿ ನಡೆಯಿತು.
ಈ ವೇಳೆ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಸಚಿನ್ ಬಿ,
ಅಧ್ಯಕ್ಷರಾಗಿ ಚಿದಾನಂದ (ಶಿಕ್ಷಕರು) ಬಳ್ಳಮಂಜ, ಉಪಾಧ್ಯಕ್ಷರಾಗಿ ವಿಜಯ ಮಡಕ್ಕಿಲ್ಲ, ಕಾರ್ಯದರ್ಶಿಯಾಗಿ ಪುನೀತ್ ಮಾಲಾಡಿ, ಜೊತೆ ಕಾರ್ಯದರ್ಶಿಯಾಗಿ ನಳಿನಿ ಹಾರಬೆ, ಕೋಶಾಧಿಕಾರಿಯಾಗಿ ಸವಿತಾ ನಾಗೇಶ್ ಮಾಲಾಡಿ ಆಯ್ಕೆಯಾದರು. ಹಿಂದಿನ ವರ್ಷದ ಲೆಕ್ಕ ಪತ್ರವನ್ನು ಚಿದಾನಂದ ಮಂಡಿಸಿದರು. ಹರ್ಷ ಸ್ವಾಗತಿಸಿ ದಿನೇಶ್ ಧನ್ಯವಾದ ಕೋರಿದರು.













