ಬೆಳ್ತಂಗಡಿ: ಕಳೆದ ನಾಲ್ಕು ತಿಂಗಳ ಹಿಂದೆ ಮರದಿಂದ ಬಿದ್ದು ಅಸ್ವಸ್ಥಗೊಂಡು ನಡೆದಾಡಲು ಕಷ್ಟಕರವಾಗಿದ್ದ ಪ್ರಕಾಶ್ ಕೆ ಇವರಿಗೆ ಜನಮಂಗಲ ಕಾರ್ಯಕ್ರಮದಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವೀಲ್ ಚೇರ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಶಿಲ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ವೀಲ್ ಚೇರ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಅರಸಿನಮಕ್ಕಿ ವಲಯದ ಮತ್ತು ಹೇವಾಜೆ ಒಕ್ಕೂಟದ ಅಧ್ಯಕ್ಷ ಗಣೇಶ್ ಪ್ರಸಾದ್, ಶಿಶಿಲ ಒಕ್ಕೂಟದ ಅಧ್ಯಕ್ಷ ಕುಶಾಲಪ್ಪ ಗೌಡ, ಮೇಲ್ವಿಚಾರಕರು ಪ್ರಿಯ, ಸೇವಾ ಪ್ರತಿನಿಧಿ ರಶ್ಮಿತಾ, ಶಿಶಿಲ ಅರಸಿನಮಕ್ಕಿ ಘಟಕದ ಘಟಕ ಪ್ರತಿನಿಧಿ ಅವಿನಾಶ್ ಬಿಢೆ ಮತ್ತು ತಂಡದ ಸದಸ್ಯರಾದ ಸುರೇಶ್ ಶಿಬಾಜೆ ,ರಮೇಶ್ ಬೈರಕಟ್ಟ, ಕೃಷ್ಣಪ್ಪಗೌಡ, ಸೀನಪ್ಪ ,ಸೋಮಶೇಖರ ಗೌಡ , ಸ್ಥಳೀಯರಾದ ಮೀನಾಕ್ಷಿ ಮತ್ತು ಅಶ್ವಸ್ಥಗೊಂಡ ವ್ಯಕ್ತಿಯ ಮನೆಯವರು ಭಾಗವಹಿಸಿದ್ದರು.













