ಅಳದಂಗಡಿ: ಸುಲ್ಕೇರಿಮೊಗ್ರು ಸದಾನಂದ ಆಚಾರ್ಯ ಮತ್ತು ಶ್ರೀಮತಿ ಆಶಾ ದಂಪತಿಯ ಪುತ್ರಿ ಸಾನ್ವಿ ಇವರ ಹತ್ತನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಈ ವೇಳೆ ವಿಶೇಷವಾಗಿ ದ್ವಿತೀಯ ಪಿ.ಯು.ಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ರಾಜ್ಯಮಟ್ಟದಲ್ಲಿ 9ನೇ ರ್ಯಾಂಕ್ ಪಡೆದ ಬಿಕ್ಕಿರ ಅಶೋಕ ಪೂಜಾರಿ ಮತ್ತು ಶ್ರೀಮತಿ ಸುಜಾತ ರವರ ಪುತ್ರಿ ಕುಮಾರಿ ಸಮೀಕ್ಷಾ ಮತ್ತು ಸೇನೆರೆ ಪಲ್ಕೆ ಶ್ರೀಧರ ಆಚಾರ್ಯ ಮತ್ತು ಶ್ರೀಮತಿ ಲೀಲಾ ಆಚಾರ್ಯ ರವರ ಪುತ್ರಿ ಸುಪ್ರೀತಾ ಹಾಗೂ ಕಾಸರಗೋಡಿನ ಉಪ್ಪಳದ ದಿನೇಶ್ ಆಚಾರ್ಯ ಮತ್ತು ಶ್ರೀಮತಿ ಪ್ರಮೋದ ಆಚಾರ್ಯ ರವರ ಪುತ್ರ ಮನ್ವಿತ್ ಇವರನ್ನು ಗೌರವ ಪೂರ್ವಕವಾಗಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕುಟುಂಬಸ್ಥರು ಮತ್ತು ಬಂಧು ಮಿತ್ರರು, ಹಿತೈಷಿಗಳು ಉಪಸ್ಥಿತರಿದ್ದರು.













