ಬೆಳ್ತಂಗಡಿ: ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ನ ಹಿರಿಯ ಮುಖಂಡ ಪಾದೆಕಲ್ಲು ವೆಂಕಟರಮಣ ಭಟ್ ರವರ ಪತ್ನಿ ಬೆಳ್ತಂಗಡಿ ಮೇಲಂತಬೆಟ್ಟು ನಿವಾಸಿ ಲಕ್ಷ್ಮೀಯಮ್ಮ (82ವ) ಅಲ್ಪಕಾಲದ ಅಸೌಖ್ಯದಿಂದ ಜೂ. 30 ರಂದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಮಕ್ಕಳಾದ ಪ್ರಭಾವತಿ, ಕನ್ನಡ ಪ್ರಭ ಪತ್ರಿಕೆಯ ಸಂಪಾದಕ ಜೋಗಿಯವರ ಪತ್ನಿ ಜ್ಯೋತಿ, ನಟ ನಿರ್ದೇಶಕ ಕೃಷ್ಣ ಬೆಳ್ತಂಗಡಿ, ಸವಿತಾ, ಶಂಕರ್ ವಿಠಲ್, ಗೀತಾಲಕ್ಷ್ಮೀ, ಇಂದಿರಾಭಟ್ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.













