ಮುಂಡಾಜೆ: ನೇಷನ್ ಬಿಲ್ಡರ್ಸ್ ಎಂಬ ಹೆಸರಿನಲ್ಲಿ ಸಂಚಲನವನ್ನು ಮೂಡಿಸಿದ ಸತ್ಯನಾರಾಯಣ ಹೊಳ್ಳ ಮುಂಡಾಜೆ ಇವರು ನೇಷನ್ ಬಿಲ್ಡರ್ಸ್ ಎಂಬ ಹೆಸರಿನ ಕೊಡೆಗಳನ್ನು ಮುಂಡಾಜೆ ಸ .ಉ . ಪ್ರಾ . ಶಾಲೆಯ ಮಕ್ಕಳಿಗೆ ಹಾಗೂ ಶಿಕ್ಷಕರಿಗೂ ವಿತರಿಸುವ ಮೂಲಕ ಮಕ್ಕಳು ದೇಶವನ್ನು ಕಟ್ಟುವವರಾಗಬೇಕು ಎಂಬ ಸಂದೇಶವನ್ನು ಸಾರಿದ್ದಾರೆ .

ಮಕ್ಕಳ ಮೇಲಿನ ಅತೀವ ಪ್ರೀತಿಯಿಂದ ಶಾಲೆ ಪ್ರಾರಂಭಕ್ಕೆ ಮುನ್ನವೇ ಕೊಡೆ ವಿತರಣೆ ಮಾಡಿದ್ದಾರೆ. ಯಾವುದೇ ಮಕ್ಕಳು ಮಳೆಯಲ್ಲಿ ನೆನೆಯುವುದು ಕಂಡರು ಅವರಿಗೆ ಕೊಡೆಯನ್ನು ನೀಡುವಂತೆ ಹೇಳಿ ಹೆಚ್ಚುವರಿ ಕೊಡೆಗಳನ್ನು ನೀಡಿದ್ದಾರೆ. ಸತ್ಯನಾರಾಯಣ ಹೊಳ್ಳ ರವರು ಮೊದಲಿನಿಂದಲೂ ಹಲವಾರು ಕೊಡುಗೆಗಳನ್ನು ಮುಂಡಾಜೆ ಸರ್ಕಾರಿ ಶಾಲೆಗೆ ನೀಡುತ್ತ ಬಂದಿದ್ದಾರೆ. ಇವರ ಕಾರ್ಯ ವೈಖರಿಗೆ ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಕ್ಷರು, ಸದಸ್ಯರು ಸಹಶಿಕ್ಷಕರು ಪೋಷಕರು, ಹಾಗೂ ಮಕ್ಕಳ ಪರವಾಗಿ ಅಭಿನಂದನೆಯನ್ನು ಸಲ್ಲಿಸಿದರು.














