July 4, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉದ್ಯಮಿ ಸತ್ಯನಾರಾಯಣ ಹೊಳ್ಳ ರವರಿಂದ ಮುಂಡಾಜೆ ಸ .ಉ . ಪ್ರಾ . ಶಾಲಾ ಮಕ್ಕಳಿಗೆ ಕೊಡೆ ವಿತರಣೆ

ಮುಂಡಾಜೆ: ನೇಷನ್ ಬಿಲ್ಡರ್ಸ್ ಎಂಬ ಹೆಸರಿನಲ್ಲಿ ಸಂಚಲನವನ್ನು ಮೂಡಿಸಿದ ಸತ್ಯನಾರಾಯಣ ಹೊಳ್ಳ ಮುಂಡಾಜೆ ಇವರು ನೇಷನ್ ಬಿಲ್ಡರ್ಸ್ ಎಂಬ ಹೆಸರಿನ ಕೊಡೆಗಳನ್ನು ಮುಂಡಾಜೆ ಸ .ಉ . ಪ್ರಾ . ಶಾಲೆಯ ಮಕ್ಕಳಿಗೆ ಹಾಗೂ ಶಿಕ್ಷಕರಿಗೂ ವಿತರಿಸುವ ಮೂಲಕ ಮಕ್ಕಳು ದೇಶವನ್ನು ಕಟ್ಟುವವರಾಗಬೇಕು ಎಂಬ ಸಂದೇಶವನ್ನು ಸಾರಿದ್ದಾರೆ .

ಮಕ್ಕಳ ಮೇಲಿನ ಅತೀವ ಪ್ರೀತಿಯಿಂದ ಶಾಲೆ ಪ್ರಾರಂಭಕ್ಕೆ ಮುನ್ನವೇ ಕೊಡೆ ವಿತರಣೆ ಮಾಡಿದ್ದಾರೆ. ಯಾವುದೇ ಮಕ್ಕಳು ಮಳೆಯಲ್ಲಿ ನೆನೆಯುವುದು ಕಂಡರು ಅವರಿಗೆ ಕೊಡೆಯನ್ನು ನೀಡುವಂತೆ ಹೇಳಿ ಹೆಚ್ಚುವರಿ ಕೊಡೆಗಳನ್ನು ನೀಡಿದ್ದಾರೆ. ಸತ್ಯನಾರಾಯಣ ಹೊಳ್ಳ ರವರು ಮೊದಲಿನಿಂದಲೂ ಹಲವಾರು ಕೊಡುಗೆಗಳನ್ನು ಮುಂಡಾಜೆ ಸರ್ಕಾರಿ ಶಾಲೆಗೆ ನೀಡುತ್ತ ಬಂದಿದ್ದಾರೆ. ಇವರ ಕಾರ್ಯ ವೈಖರಿಗೆ ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಕ್ಷರು, ಸದಸ್ಯರು ಸಹಶಿಕ್ಷಕರು ಪೋಷಕರು, ಹಾಗೂ ಮಕ್ಕಳ ಪರವಾಗಿ ಅಭಿನಂದನೆಯನ್ನು ಸಲ್ಲಿಸಿದರು.

Related posts

ಮುಂಡಾಜೆ: ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಟೆಂಪೋ

Suddi Udaya

ಬೆಳ್ತಂಗಡಿ ಚರ್ಚ್ ರೋಡ್ ಬಳಿ ಚರಂಡಿಗೆ ವಾಲಿದ ಕಾರು

Suddi Udaya

ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಜಯಾನಂದ ಗೌಡ, ಉಪಾಧ್ಯಕ್ಷರಾಗಿ ಗೌರಿ ಅವಿರೋಧ ಆಯ್ಕೆ

Suddi Udaya

ಅಳದಂಗಡಿ ಗ್ರಾ.ಪಂಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ ಕೆ. ಭೇಟಿ: ಪಂಚಾಯತ್ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳ ಪರಿಶೀಲನೆ

Suddi Udaya

ಶ್ರೀ ಗುರುದೇವ ಪಿ.ಯು.ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya

ಮಿಜಾರುಗುತ್ತು ಆನಂದ ಆಳ್ವ ರವರ ನಿಧನಕ್ಕೆ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya
error: Content is protected !!