ಮಚ್ಚಿನ: ಹಿರಿಯ ಅಂಚೆಪಾಲಕರಾದ ರಮೇಶ್ ರಾವ್ (83 ವರ್ಷ) ಜು.2ರಂದು ಸಂಜೆ ಸಂಜೆ ನಿಧನಾದರು.
ಇವರು ಮಚ್ಚಿನ ಗ್ರಾಮದ ಅಂಚೆಪಾಲಕರಾಗಿ ಸುಮಾರು 30 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ಇವರು ಹವ್ಯಾಸಿ ಯಕ್ಷಗಾನ ಆರ್ಥದಾರಿ ಹಾಗೂ ವೇಷದಾರಿಯಾಗಿದ್ದು ಉತ್ತಮ ಕಲಾವಿದರಾಗಿದ್ದರು. ಪಾರೆಂಕಿ ಮಹಿಷ ಮರ್ದಿನಿ ದೇವಸ್ಥಾನದ ಮತ್ತು ಮಾರಿಕಾಂಬ ದೇವಿ ದೇವಸ್ಥಾನ ಮಾರಿಗುಡಿಯ ಪವಿತ್ರ ಪಾಣಿಯಾಗಿದ್ದು. ಬಳ್ಳಮಂಜ ಅನಂತೇಶ್ವರ ಭಜನ ಮಂಡಳಿಯ ಹಿರಿಯ ಮಾರ್ಗದರ್ಶಕರಾಗಿ ಹಲವರು ಸಂಘ-ಸಂಸ್ಥೆಯಲ್ಲಿ ಗುರುತಿಸಿಕೊಂಡಿದ್ದರು.
ಮೃತರು ಪತ್ನಿ ಲಕ್ಷ್ಮಿ, ಪುತ್ರರಾದ ಅನಂತ ಕೃಷ್ಣ ಭಟ್, ಗೋಪಾಲಕೃಷ್ಣ ಭಟ್, ಪುತ್ರಿ ಸುಜಾತ ಹಾಗೂ ಅಪಾರ ಬಂಧು ಮಿತ್ರರುನ್ನು ಅಗಲಿದ್ದಾರೆ.














