ಮಿತ್ತಬಾಗಿಲು: ಕೊಲ್ಲಿ ದುರ್ಗಾಪರಮೇಶ್ವರಿ ಶ್ರೀ ದುರ್ಗಾದೇವಿ ದೇವಸ್ಥಾನದ ಅಭಿವೃದ್ಧಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ರೂ.1ಲಕ್ಷ ಚೆಕ್ ನ್ನು ಜು.3 ರಂದು ಧರ್ಮಸ್ಥಳ ಯೋಜನೆಯ ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಯಶೋಧರ ರವರು ದೇವಳದ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಧರ್ಮಸ್ಥಳ ಯೋಜನೆಯ ಇಂದಬೆಟ್ಟು ವಲಯದ ಮೇಲ್ವಿಚಾರಕಿ ಉಷಾ, ಆಡಳಿತ ಮಂಡಳಿಯ ಅಧ್ಯಕ್ಷ ದಾಸಪ್ಪಗೌಡ ಕಾಂಜಾನು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸತೀಶ್ ಕಾಮತ್, ಸಮಿತಿಯ ಸದಸ್ಯರಾದ ಕೃಷ್ಣಪ್ಪ ಪೂಜಾರಿ, ಕೇಶವ ಫಡಕೆ, ಹರಿಣಾಕ್ಷಿ, ಉಮೇಶ್ ಬೆಡಿಗುತ್ತು, ನೇಮಿರಾಜ್ ಕಿಲ್ಲೂರು, ಸುಚಿತ್ರ ಮರಾಠೆ, ಸತೀಶ್ ಕುಮಾರ್ ದಂಪತಿಗಳು ಬೆಳ್ಳೂರು ಗುತ್ತು ಹಾಗೂ ಇನ್ನಿತರರು ಉಪಸ್ಥಿತರಿದ್ದರು.














