ಧರ್ಮಸ್ಥಳ: ಧರ್ಮಸ್ಥಳ ಮಂಜುನಾಥೇಶ್ವರ ಅಂಗಮಾಧ್ಯಮ ಶಾಲೆಯಲ್ಲಿ ಐದರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆಯನ್ನು ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಜನಾಗೃತಿ ವೇದಿಕೆಯ ಕಾರ್ಯದರ್ಶಿಗಳಾದ ವಿವೇಕ್ ವಿನ್ಸೆಂಟ್ ಪಾಯಸ್ ಆಗಮಿಸಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು ಮಕ್ಕಳಿಗೆ ವಿಷಯಾಧಾರಿತ ಪಾಠ ಹೇಳಿ ಕೊಡಬೇಕೇ ಹೊರತು ವಿಷಾಧಾರಿತ ವಿಷಯಗಳನ್ನು ಹೇಳಿಕೊಡಬಾರದು.ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಮಕ್ಕಳಿಗೆ ಹೇಗೆ ಹಾಗೂ ಯಾಕೆ ಹೇಳಿ ಕೊಡಬೇಕು. ಹೆತ್ತವರು ಹೇಗೆ ಮಾದರಿ ಆಗಿರಬೇಕು, ವಿದ್ಯಾಭ್ಯಾಸ ಮನಸ್ಸು ಹಾಗೂ ಹೃದಯದಲ್ಲಿ ಜಾಗೃತಿ ಮೂಡಿಸಬೇಕು,ತಂದೆ ತಾಯಿಯ ಗುಣ ಮಕ್ಕಳಲ್ಲಿ ಫಲ ಕೊಡುತ್ತದೆ ಎಂಬಿತ್ಯಾದಿಹತ್ತು ಹಲವು ವಿಚಾರಗಳನ್ನು ಉದಾಹರಣೆ, ನಿದರ್ಶನ ಹಾಗೂ ಪಂಚತಂತ್ರ ,ವೇದ ಇತ್ಯಾದಿಗಳ ವಿಚಾರಧಾರೆಯ ಜೊತೆಗೆ ವಿವರಿಸಿದರು.
ಶಾಲಾ ಸಹ ಶಿಕ್ಷಕಿ ಶ್ರೀಮತಿ ಕಾವ್ಯ ನಿರ್ವಹಿಸಿದ ಕಾರ್ಯಕ್ರಮದಲ್ಲಿ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳು ಹೆತ್ತವರು ಶಿಕ್ಷಕರು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.














