ಉಜಿರೆ : ಎಸ್ ಡಿ ಎಮ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಥಮ ವರ್ಷದ ಡಿಪ್ಲೋಮಾ ವಿದ್ಯಾರ್ಥಿಗಳಿಗಾಗಿ ಸೈಬರ್ ಶೀಲ್ಡ್ ವಿದ್ಯಾರ್ಥಿ ಜಾಗೃತಿ ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾ ಯೋಜನೆಯ ಸಹಭಾಗಿತ್ವದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಜು. 2 ರಂದು ಆಯೋಜಿಸಲಾಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಉದಯ ರವಿ ಪೊಲೀಸ್ ಸಬ್ಇನ್ಸ್ಪೆಕ್ಟರ್ ಸೈಬರ್ ಅಪರಾಧ ಇಲಾಖೆ ಮಂಗಳೂರು ವಿಭಾಗ ಇವರು ಮಾತನಾಡಿ ಸಾಮಾಜಿಕ ಜಾಲತಾಣವನ್ನು ಮಿತವಾಗಿ ಬಳಸಬೇಕು , ಮಿತಿ ಮೀರಿದರೆ ಅನಾಹುತಕ್ಕೆ ಕಾರಣವಾಗುತ್ತದೆ, ಲೋನ್ ಆ್ಯಪ್ ಗಳಿಗೆ ಬಲಿಯಾಗಬೇಡಿ, ಒಟಿಪಿ ಅಥವಾ ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ , ಸಾಮಾಜಿಕ ಜಾಲತಾಣದ ಖಾತೆಗಳಿಗೆ ದ್ರಢವಾದ ಪಾಸ್ವರ್ಡ್ ಗಳನ್ನು ಬಳಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅದಲ್ಲದೆ, ಒಟಿಪಿ ವಂಚನೆ ಖಾತೆ ಹ್ಯಾಕಿಂಗ್, ಸೈಬರ್ ಸ್ಟಾಕಿಂಗ್, .ಎ ಪಿ ಕೆ ಫೈಲ್ ವಂಚನೆ, ಸೈಬರ್ ಬೆದರಿಕೆ ಮತ್ತು ಕಿರುಕುಳಗಳು, ಹೂಡಿಕೆ ವಂಚನೆ, ನಕಲಿ ಸಾಲ ಅಪ್ಪ್ಲಿಕೆಶನ್ಸ್ ಗಳು , ಡೇಟಿಂಗ್ ಅಪ್ಪ್ಲಿಕೇಷನ್ಸ್ಗಳು (ದಾಂಪತ್ಯ ವಂಚನೆ), ಡಿಜಿಟಲ್ ಬಂಧನ ವಂಚನೆ, ಟೆಲಿಕಾಂ ಹಗರಣ ಮತ್ತು ಸ್ಕ್ಯಾಮ್ ವರದಿ ಮಾಡುವಿಕೆ, ಪೋಕ್ಸೊ ಕಾಯಿದೆ, ಸೈಬರ್ ವಂಚನೆಯ ಬಗ್ಗೆ ಮಾಹಿತಿ ನೀಡಿದರು. ಸಿಮ್ ಕಾರ್ಡ್ ವಂಚನೆ ಮತ್ತು ನಿರ್ವಹಣೆ, ಸಂಚಾರ ಸಾಥಿ ವೇದಿಕೆಯ ಪ್ರಯೋಜನಗಳು , ಆನ್ಲೈನ್ ವಂಚನೆ ಬಗ್ಗೆ ದೂರು ದಾಖಲಿಸುವುದು ಹೇಗೆ ಎಂಬಿತ್ಯಾದಿ ಮಾಹಿತಿಗಳನ್ನು ನೀಡಿದರು .
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಮಾತನಾಡಿ, ನಾವೀಗ ಡಿಜಿಟಲ್ ಯುಗದಲ್ಲಿದ್ದೇವೆ ಆದ್ದರಿಂದ ಸೈಬರ್ ವಂಚನೆಗೆ ಒಳಗಾಗುವ ಸಾಧ್ಯತೆಯಿದೆ ವಂಚಕರು ಅನೇಕ ವಿಧಾನಗಳಿಂದ ನಮ್ಮನ್ನು ವಂಚಿಸುವ ಸಾಧ್ಯತೆ ಇದೆ ಜಾಗರೂಕರಾಗಿರಿ ಎಂದು ಹೇಳಿದರು. ವೇದಿಕೆಯಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಸಾಯಿಚರಣ್ ಸಿ ಎಚ್ ಉಪಸ್ಥಿತರಿದ್ದರು.
ಸಂತೋಷ್ ಸಿ ಪಿ ಸಿ ಮಂಗಳೂರು ವಿಭಾಗ, ಕಾಲೇಜಿನ ವ್ಯವಸ್ಥಾಪಕರಾದ ಚಂದ್ರನಾಥ್ ಜೈನ್, ಎಲ್ಲಾ ವಿಭಾಗಗಳ ಮುಖ್ಯಸ್ಥರು , ಉಪನ್ಯಾಸಕರು ಹಾಗೂವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕಿ ಪೃಥ್ವಿ ಸ್ವಾಗತಿಸಿ, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕ ಸಂಪತ್ ಕುಮಾರ್ ನಿರೂಪಿಸಿದರು.














