ಉಜಿರೆ: ಇಲ್ಲಿಯ ರಾಜಲೀಲಾ ರೆಸಿಡೆನ್ಸಿ ಕಟ್ಟಡ ಹೆಚ್ ಪಿ ಪೆಟ್ರೋಲ್ ಪಂಪ್ ಹತ್ತಿರ ಗಣೇಶ್ ಹೆಲ್ಮೆಟ್ಸ್ ಇದರ ಶುಭಾರಂಭವು ಜು.12ರಂದು ನಡೆಯಿತು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಅನುವಂಶೀಯ ಆಡಳಿತ ಮೊಕ್ತೇಸರರು ಶರತ್ ಕೃಷ್ಣ ಪಡುವೆಟ್ನಾಯರವರು ಉದ್ಘಾಟಿಸಿ, ಶುಭಹಾರೈಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ತುಳು ಹಾಗೂ ಕನ್ನಡ ಚಲನಚಿತ್ರ ನಟಿ ಸಿಂಚನ ಪಿ ರಾವ್ ಉಜಿರೆ, ಹಾಗೂ ಅಂಗಡಿಯ ಮಾಲಕರಾದ ಗಣೇಶ್ ಕೆ ಹಾಗೂ ಅವರ ಕುಟುಂಬಸ್ಥರು ಮತ್ತು ಗೆಳೆಯರು ಉಪಸ್ಥಿತರಿದ್ದರು.
ತಮ್ಮಲ್ಲಿ ಎಲ್ಲಾ ತರದ ಅತ್ಯುತ್ತಮ ಹೆಲ್ಮೆಟ್ಸ್ ಗಳು ಹಾಗೂ ದ್ವಿಚಕ್ರ ವಾಹನದ ಎಲ್ಲಾ ತರದ ಬಿಡಿ ಭಾಗಗಳು ದೊರೆಯುತ್ತದೆ ಮತ್ತು ಅಳವಡಿಸಿಕೊಡಲಾಗುವುದು.
















