ಗೇರುಕಟ್ಟೆ: ನಾಳ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ವರಮಹಾಲಕ್ಷ್ಮಿ ಪೂಜಾ ಸಮಿತಿ ರಚನೆಯು ಜು.12 ರಂದು ನಡೆಯಿತು.
ಗೌರವಾಧ್ಯಕ್ಷರಾಗಿ ಪುಷ್ಪ ಉದಯ, ಅಧ್ಯಕ್ಷರಾಗಿ ಸಂಧ್ಯಾ ಸುರೇಶ್, ಉಪಾಧ್ಯಕ್ಷರಾಗಿ ವಿನೋದ, ಕಾರ್ಯದರ್ಶಿಯಾಗಿ ರಾಜೀವಿ ಪದ್ಮನಾಭ, ಜೊತೆಕಾರ್ಯದರ್ಶಿಯಾಗಿ ಸುಮಿತ್ರ ಸುರೇಶ್, ಕೋಶಾಧಿಕಾರಿಯಾಗಿ ಅನುಪಮಾ ಸತೀಶ್ , ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ನ್ಯಾಯತರ್ಪು ಒಕ್ಕೂಟದ ಅಧ್ಯಕ್ಷ ಸಿದ್ದಪ್ಪಗೌಡ ಹಾಗೂ ಕಳಿಯ ಒಕ್ಕೂಟದ ಅಧ್ಯಕ್ಷೆ ಸುಭಾಷಿಣಿ ಜನಾರ್ದನ್ ಗೌಡ, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಹರೀಶ್ ಕುಮಾರ್, ದೇವಸ್ಥಾನದ ಪ್ರಧಾನ ಅರ್ಚಕರಾದ ರಾಘವೇಂದ್ರ ಅಶ್ರಣ್ಣ , ಕಳಿಯ ಸಿಎ ಬ್ಯಾಂಕ್ ಅಧ್ಯಕ್ಷ ವಸಂತ ಮಜಲ್, ದೇವಸ್ಥಾನದ ಮ್ಯಾನೇಜರ್ ಗಿರೀಶ್, ಯಾದವ ಗೌಡ , ರಾಜೇಶ್ ಪೆರ್ಮುಡ, ಜ್ಞಾನ ವಿಕಾಸ ಸಂಯೋಜಕಿ ರೀತಾ, ಸುಧಾಕರ ಮಜಲು,ವಲಯ ಮೇಲ್ವಿಚಾರಕರಾದ ಜಿ.ರವಿ ಹಾಗೂ ಸೇವಾ ಪ್ರತಿನಿಧಿಯವರು ಹಾಗೂ ಸಂಘ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.
















