
ಬಳಂಜ : ಜಿಲ್ಲೆಯ ಹೆಸರಾಂತ ಭಜನಾ ಮಂಡಳಿಗಳಲ್ಲಿ ಒಂದಾದ ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯ ನೇತೃತ್ವದಲ್ಲಿ ಮಂಡಳಿಯ ಸದಸ್ಯರಿಗೆ ಉಚಿತ ಪುಸ್ತಕ ಹಾಗೂ ಪೆನ್ನು ವಿತರಣಾ ಕಾರ್ಯಕ್ರಮವು ಜು.12 ರಂದು ಬಳಂಜ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ವಹಿಸಿದರು. ಕಾರ್ಯಕ್ರಮವನ್ನು ಉದ್ಯಮಿಗಳಾದ ಯೋಗೀಶ್ ಪೂಜಾರಿ ಕಾಪಿನಡ್ಕರವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ಎಚ್ ಎಸ್,
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವಲಯಾದ್ಯಕ್ಷ ಸದಾನಂದ ಸಾಲಿಯಾನ್, ಮಂಡಳಿಯ ಮಾಜಿ ಅಧ್ಯಕ್ಷೆ ಜ್ಯೋತಿ ಉಪಸ್ಥಿತರಿದ್ದರು.
ಮಂಡಳಿಯ ಪ್ರಧಾನ ಸಂಚಾಲಕ ಹರೀಶ್ ವೈ ಚಂದ್ರಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವರ್ಷದ ಪುಸ್ತಕ ವಿತರಣೆಗೆ ಯುವ ಉದ್ಯಮಿಗಳಾದ ಅಶ್ರಫ್ ಬಳಂಜ ಪೂರ್ಣ ಸಹಕಾರವನ್ನು ನೀಡಿದ್ದು ಅಶ್ರಫ್ ರವರ ಸಲಹೆಯಂತೆ ಅವರ ಆತ್ಮೀಯ ಸ್ನೇಹಿತರು ಹಾಗೂ ಮಂಡಳಿಯ ಸಹ ಸಂಚಾಲಕರಾದ ಪ್ರಣಾಮ್ ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮನ್ವಿತ ಸ್ವಾಗತಿಸಿದರು. ಪ್ರತಿಕ್ಷಾ ಪ್ರಾರ್ಥನೆ ಹಾಡಿದರು. ಮಂಡಳಿಯ ತರಬೇತುದಾರೆ ಕು.ಮಾನ್ಯ ಕಾರ್ಯಕ್ರಮ ನಿರೂಪಿಸಿ, ಮಂಡಳಿಯ ಅಧ್ಯಕ್ಷೆ ಕುಮಾರಿ ಪ್ರಸಿದ್ದಿ ಶೆಟ್ಟಿ ಧನ್ಯವಾದ ಸಲ್ಲಿಸಿದರು. ಸಂಜೆ ಮಂಡಳಿಯ ವತಿಯಿಂದ ಬೊಲ್ಲಜ್ಜ ದೈವಕ್ಕೆ ಅಗೆಲು ಸೇವೆ ನಡೆಯಿತು.















