July 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಂಗಳೂರಿನ ಕನ್ಸೇರೋ ಕಂಪೆನಿಯ ಉದ್ಯೋಗಿಗಳಿಂದ ಪರಶುರಾಮ ವನದಲ್ಲಿ ವನಮಹೋತ್ಸವ

ಹತ್ಯಡ್ಕ: ಬಹುರಾಷ್ಟ್ರೀಯ ಕಂಪೆನಿ ಕನ್ಸೇರೋ (CONSERO) ದ ಬೆಂಗಳೂರಿನ ಉದ್ಯೋಗಿಗಳು ಬೆಳ್ತಂಗಡಿ ಹತ್ಯಡ್ಕ ಗ್ರಾಮದ ಕಾಲಕಾಮ ಪರಶುರಾಮ ದೇವಸ್ಥಾನದ ಬಳಿ ಇರುವ ಪರಶುರಾಮ ವನದಲ್ಲಿ ವನಮಹೋತ್ಸವ ಆಚರಿಸಿದರು.

ಕಂಪೆನಿಯ ಉದ್ಯೋಗಿ ಸ್ಥಳೀಯರಾದ ನವೀನ ದಾಮ್ಲೆಯವರು ನೇತೃತ್ವ ವಹಿಸಿದ್ದರು. ಸುಮಾರು 20 ಉದ್ಯೋಗಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸುಮಾರು 150 ಕ್ಕೂ ಮಿಕ್ಕಿದ ವಿವಿಧ ಪ್ರಭೇದಗಳ ಸಸ್ಯಗಳನ್ನು ನೆಟ್ಟರು.

ಪರಶುರಾಮ ವನದ ರೂವಾರಿ ಗೋವಿಂದ ದಾಮ್ಲೆ ಸ್ವಾಗತಿಸಿ, ಮಾರ್ಗದರ್ಶನ ನೀಡಿದರು. ವನ ನಿರ್ಮಾಣದ ಉದ್ದೇಶ ಕಲ್ಪನೆಗಳನ್ನು ಪ್ರಸ್ತಾಪಿಸಿದರು. ಉದ್ಯೋಗಿ ಡಾ. ರವಿ ಮಕ್ಕಂ ಇವರು ಕಳೆದ ವರ್ಷದಿಂದಲೂ ಪರಶುರಾಮ ವನದಲ್ಲಿ ವಹಿಸಿದ ಶ್ರಮದಿಂದ ಗಿಡಗಳ ಬದುಕುವಿಕೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ರಾಶಿವನ, ನಕ್ಷತ್ರ ವನ, ನವಗ್ರಹ ವನಗಳ ಕಲ್ಪನೆಯನ್ನು ಸಾಕಾರಗೊಳಿಸಿದ ಬಗ್ಗೆಯೂ ಸಂತೋಷದ ಮಾತನ್ನಾಡಿದರು.

ಉದ್ಯೋಗಿ ವಿನಯ್ ಮಯ್ಯರವರು ಗೋವಿಂದ ದಾಮ್ಲೆಯವರ ಸ್ವಯಂ ಸ್ಫೂರ್ತಿಯ ಕಾರಣದಿಂದ ಒಂದು ಮಾದರಿ ವನ ರೂಪಿತವಾಗಿ ಮುಂದಿನ ಪೀಳಿಗೆಯವರಿಗೆ ಅನೇಕ ಗಿಡಗಳ ಪರಿಚಯ ಇಲ್ಲಿ ಸಿಗುವಂತೆ ಮಾಡಿದ್ದಾರೆ. ಅಭಿನಂದನೀಯ ಕಾರ್ಯ ನಡೆಸಿದ್ದಾರೆ ಎಂದರು. ನಂತರ ಶಿಶಿಲದ ನಾಗನಡ್ಕ ಅರ್ಬಿ ಗುಡ್ಡದಲ್ಲಿ ವಿವಿಧ ಜಾತಿಗಳ ಸಸ್ಯಗಳ ಬೀಜಗಳ ಬಿತ್ತನೆ ನಡೆಸಲಾಯಿತು.
ಇವರೊಂದಿಗೆ ಸ್ಥಳೀಯರಾದ ಆಸುಪಾಸಿನ ಹಿಮಾಂಶು ಕುಲಕರ್ಣಿ, ಅರವಿಂದ ತುಳುಪುಳೆ, ವೇಣುಗೋಪಾಲ ಗೋಖಲೆ, ಪ್ರಾಣೇಶ ಖರೆ, ಕಾರ್ತಿಕ ದಾಮ್ಲೆ ಪಾಲ್ಗೊಂಡಿದ್ದರು.

Related posts

ಸಿಯೋನ್ ಆಶ್ರಮದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾಟ: ಕಕ್ಕಿಂಜೆಯ ಶೇಖ್ ಅಝೀಮ್ ರಿಗೆ ಪ್ರಶಸ್ತಿ

Suddi Udaya

ಬಂದಾರು-ಕುರಾಯ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವ ಆರಂಭ

Suddi Udaya

ಶ್ರೀ ಧ.ಮಂ ಪ.ಪೂ ಕಾಲೇಜಿನಲ್ಲಿ ” ಭಿತ್ತಿಪತ್ರಿಕೆ ಅನಾವರಣ “

Suddi Udaya

ಉಜಿರೆ: ಎಸ್.ಡಿ.ಎಮ್ ಕಾಲೇಜಿನಲ್ಲಿ ವಿಶ್ವ ದೂರಸಂಪರ್ಕ ದಿನ: ವಿಶೇಷ ಉಪನ್ಯಾಸ

Suddi Udaya

ಪುನೀತ್ ಕೆರೆಹಳ್ಳಿಯನ್ನು ಬಿಡುಗಡೆ ಮಾಡಿದ ಬೆಳ್ತಂಗಡಿ ಪೊಲೀಸರು

Suddi Udaya
error: Content is protected !!