ನಾವೂರು: ಮುಹಿಯುದ್ದೀನ್ ಜುಮಾ ಮಸೀದಿ, ಮುರ-ನಾವೂರಿನಲ್ಲಿ 2026ನೇ ಸಾಲಿನ ಮೀಲಾದ್ ಸ್ವಾಗತ ಸಮಿತಿಯನ್ನು ಜಮಾಅತ್ ಕಮಿಟಿಯ ಅಧ್ಯಕ್ಷ ಇಬ್ರಾಹಿಂ ಸಿ.ಎಂ. ಅವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು.
ಸಮಿತಿಯ ಅಧ್ಯಕ್ಷರಾಗಿ ಸುಲೇಮಾನ್ ಪಿ.ವೈ., ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ನಾವೂರು, ಕೋಶಾಧಿಕಾರಿಯಾಗಿ ಶಹೀರ್ ನಾವೂರು ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ತಾಜುದ್ದೀನ್ ಕಿರ್ನಡ್ಕ ಹಾಗೂ ಇಬ್ರಾಹಿಂ ಪಿ.ಎ., ಜೊತೆ ಕಾರ್ಯದರ್ಶಿಗಳಾಗಿ ಈಸಾ ಕೇಳ್ತಾಜೆ ಮತ್ತು ಅಶ್ರಫ್ ಡಿ.ಎಂ. ಅವರನ್ನು ನೇಮಕ ಮಾಡಲಾಯಿತು. ಇವರನ್ನೊಳಗೊಂಡ ಒಟ್ಟು 26 ಸದಸ್ಯರ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಸಭೆಯಲ್ಲಿ ಪ್ರಸಕ್ತ ಸಾಲಿನ ಮೀಲಾದ್ ಕಾರ್ಯಕ್ರಮ, ನಬಿದಿನ ರ್ಯಾಲಿ ಹಾಗೂ ಮದರಸ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅರ್ಥಪೂರ್ಣ ಹಾಗೂ ಯಶಸ್ವಿಯಾಗಿ ಆಯೋಜಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವ ಕುರಿತು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬರಾದ ಬಹು. ಬಶೀರ್ ಸಅದಿ ಕೆಮ್ಮಾರ ಅವರು ದುಆ ಹಾಗೂ ಆಶೀರ್ವಚನ ನೀಡಿದರು.
ಮುಹಿಯುದ್ದೀನ್ ಜುಮಾ ಮಸೀದಿ ಮುರ-ನಾವೂರಿನ ಪ್ರಧಾನ ಕಾರ್ಯದರ್ಶಿ ಜಲೀಲ್ ಪಡಂಬಿಲ ಸ್ವಾಗತಿಸಿ, ಕಾರ್ಯದರ್ಶಿ ಖಾದರ್ ನಾವೂರು ವಂದಿಸಿದರು.















