24.7 C
ಪುತ್ತೂರು, ಬೆಳ್ತಂಗಡಿ
August 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ : ಶ್ರೀ.ಧ.ಮಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ‘ವಿದ್ಯಾರ್ಥಿ ಸಂಸತ್ತು ಉದ್ಘಾಟನೆ’

ಎಸ್.ಡಿ.ಎಂ ಎನ್ನುವ ಬ್ರಾಂಡ್,ಕಾಲೇಜು ಅದೆಷ್ಟೋ ಪ್ರಜ್ಞಾವಂತ ನಾಗರಿಕರಿಗೆ ಪ್ರೇರಣೆ ಆಗಿದೆ. ವಿದ್ಯಾರ್ಥಿ ಆಗಿ ಎದುರಿಸುವ ಚುನಾವಣೆ, ಅಧಿಕಾರ ಇವೆಲ್ಲ ನಮ್ಮ ಸಾಮಾಜಿಕ ಕಳಕಳಿ ಅರಿವು ಅರಿಯುವ ಸಲುವಾಗಿಯೇ ಆಗಿದೆ. ಹೆತ್ತವರ ತ್ಯಾಗ, ಉತ್ತಮ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಬೆಳವಣಿಗೆ ಆದಾಗಲೇ ಜೀವನ ಸಾರ್ಥಕ. ವಸತಿ ಪದವಿ ಪೂರ್ವ ಕಾಲೇಜು ನೀಡುವ ಎರಡು ವರ್ಷದ ಮೌಲ್ಯ, ಸಂಸ್ಕಾರ ಬದುಕಿನುದ್ದಕ್ಕೂ ಸಹಾಯಕ. ಅಂಕಪಟ್ಟಿ ಕಳೆದುಕೊಂಡರೆ ಮತ್ತೆ ಪಡೆಯಬಹುದು, ನಡತೆ ಕಳೆದುಕೊಂಡರೆ ಮತ್ತೇ ಮರಳಿ ಪಡೆಯಲು ಸಾಧ್ಯವಿಲ್ಲ ನಾಗರೀಕ ಪ್ರಜ್ಞೆಯ ಕೊರತೆ ನೀಗಿಸಲು ಕೆಲವೊಂದು ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು, ಒಳ್ಳೆ ಕೆಲಸ, ಕೇಳಿಸಿಕೊಳ್ಳುವ ಗುಣ, ತಾಳ್ಮೆ, ಇವೆಲ್ಲಾ ಯಶಸ್ಸಿನ ಸೂತ್ರ. ಹಾಗಾಗಿ ಕಲಿಕೆ ಜೊತೆಗೆ ಬೆಳೆಸಿಕೊಳ್ಳುವ ನಾಯಕತ್ವ ಗುಣ ಕನಸುಗಳಿಗೆ ರೆಕ್ಕೆ ಪುಕ್ಕ ಹಚ್ಚಿ ಮೇಲೇರಲು ಸ್ವತ: ಪ್ರಯತ್ನ ಪಡಿ, ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ ಎಂದು ಎಸ್.ಡಿ.ಎಂ.ಸ್ನಾತಕೋತ್ತರ ಕಾಲೇಜಿನ, ಪತ್ರಿಕೋದ್ಯಮ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಹಂಪೇಶ್ ಹೇಳಿದರು.

ಇವರು ಶ್ರೀ.ಧ.ಮಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ತನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಅತಿಥಿಯಾಗಿ ಆಗಮಿಸಿದ ಕಾಲೇಜಿನ ಹೆಮ್ಮೆಯ ಹಿರಿಯ ವಿದ್ಯಾರ್ಥಿ, ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಡಾ. ಸುಪುತ್ರ ಗೌಡ ವಿದ್ಯಾರ್ಥಿಗಳಿಗೆ ತಮ್ಮ ಕಾಲೇಜು ಜೀವನ, ಜೊತೆಗೆ ವಸತಿ ನಿಲಯ ಕಾಲೇಜು ನೀಡಿದ ಸಂಸ್ಕಾರದೊಂದಿಗೆ ತಾನು ಬದುಕಿನ ಗುರಿ ತಲುಪಿದ ಅನುಭವಗಳನ್ನು ಹಂಚಿಕೊಂಡರು. ವ್ಯಸನಗಳಿಂದ ದೂರವಿರುವ ಕುರಿತಾಗಿ ಮಾರ್ಗದರ್ಶನ ನೀಡಿದರು. ನಿರಂತರ ಶ್ರಮ ವಹಿಸಿ ಬದುಕಿನಲ್ಲಿ ಕಲಿಕೆಯನ್ನು ಮುಖ್ಯ ಅಂಶವಾಗಿ ತೆಗೆದುಕೊಳ್ಳಿ, ನಿರ್ಲಕ್ಷಸಲ್ಲದೆಂದು ತಿಳಿ ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಅವರು ವಿದ್ಯಾರ್ಥಿ ನಾಯಕರಿಗೆ ಪ್ರಮಾಣ ವಚನ ಬೋಧಿಸಿ, ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು.

ವೇದಿಕೆಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಮನೀಶ್ ಕುಮಾರ್ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪವಿತ್ರ ಕುಮಾರ್ ಉಪಸ್ಥಿತರಿದ್ದರು.

ಎಸ್. ಡಿ. ಎಂ ಸಂಸ್ಥೆಯ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಭಾಗವಹಿಸಿದ್ದರು. ಕಾಲೇಜಿನ ಬೋಧಕ ಬೋಧಕೇತರ ಸಿಬಂದಿಗಳು ಉಪಸ್ಥಿತರಿದ್ದರು.

ಇಂಗ್ಲೀಷ್ ವಿಭಾಗ ಮುಖ್ಯಸ್ಥೆ ಶ್ರೀಮತಿ ಭವ್ಯಶ್ರೀ ನಿರೂಪಿಸಿದರು. ಕಾಲೇಜು ನಾಯಕ ರಿಷಿ ವಂದಿಸಿದರು.

Related posts

ಭೀಕರ ರಸ್ತೆ ಅಪಘಾತ: ದ್ವಿಚಕ್ರ ಸವಾರ ಸ್ಥಳದಲ್ಲೇ ಮೃತ್ಯು

Suddi Udaya

“ಕಲಾ -ಸಂಭ್ರಮ 2024” ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅಳದಂಗಡಿ ಸರಕಾರಿ ಪ್ರೌಢ ಶಾಲೆಗೆ ಪ್ರಶಸ್ತಿ

Suddi Udaya

ರಾಜ್ಯದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಿಕ್ಕು ತೋರಿದ ‘ಆಸರೆ’ – ಕುಂಭಶ್ರೀ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ಪ್ರವೇಶ ಪರೀಕ್ಷೆಗೆ ಅಭೂತಪೂರ್ವ ಸ್ಪಂದನೆ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಬೆಳಾಲು ಕಾರ್ಯಕ್ಷೇತ್ರದ ಸದಸ್ಯ ಬಾಬು ಗೌಡ ರವರಿಗೆ ಊರುಗೋಲು ವಿತರಣೆ

Suddi Udaya

ವಿಚಾರಣೆ ಮುಗಿಸಿ ತಡರಾತ್ರಿ ವಾಪಸ್ ಹೋದ ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಂತಿ

Suddi Udaya

ಕಬಡ್ಡಿ ಪಂದ್ಯಾಟದಲ್ಲಿ ಸುಲ್ಕೇರಿಯ ಶಶಿಕಾಂತ್ ರವರ ವಿಶೇಷ ಸಾಧನೆ: ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆ

Suddi Udaya
error: Content is protected !!