30.1 C
ಪುತ್ತೂರು, ಬೆಳ್ತಂಗಡಿ
July 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆಯಲ್ಲಿ ನೂತನ ರೂಪದಲ್ಲಿ ಶುಭಾರಂಭಗೊಂಡ ‘ಶ್ರೀರಾಮ್ ತರಕಾರಿ & ಫ್ರೂಟ್ಸ್’

ಬೆಳ್ತಂಗಡಿ: ಉಜಿರೆ ಮಾರಿಗುಡಿ ದ್ವಾರದ ಮುಂಭಾಗದಲ್ಲಿರುವ ‘ಶ್ರೀರಾಮ್ ತರಕಾರಿ & ಫ್ರೂಟ್ಸ್’ ಮಳಿಗೆಯು ಸಂಪೂರ್ಣ ನವೀಕೃತಗೊಂಡು ಹೊಸ ರೂಪದಲ್ಲಿ ಜು.15ರಂದು ಶುಭಾರಂಭಗೊಂಡಿತು.

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲೀಕ ಕೆ. ಮೋಹನ್ ಕುಮಾರ್ , ಉಜಿರೆ ಮಾಧವ ಪಡ್ವೆಟ್ನಾಯ, ಉದಯ ಚಿಕನ್ ಮಾಲೀಕ ರಾಮಚಂದ್ರ ಶೆಟ್ಟಿ, ಶ್ರೀಪತಿ ಪಡ್ವೆಟ್ನಾಯ, ಶ್ರೀಶ ಪಡ್ವೆಟ್ನಾಯ ಹಾಗೂ ರಾಜಾರಾಮ್ ದಂಪತಿ ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭಕೋರಿದರು.

ಕಾರ್ಯಕ್ತಮದಲ್ಕಿ ಜಯಪ್ರಕಾಶ್ ಶೆಟ್ಟಿ, ಗಣೇಶ್ ಕಕ್ಕಿಂಜೆ, ಪ್ರಶಾಂತ್ ಜೈನ್ ಅಮೃತ್, ಪ್ರಭಾಕರ ಜೈನ್ ಮಹಾವೀರ, ಹುಕುಂರಾಮ್ ಪಟೇಲ್, ಪುರುಷೋತ್ತಮ ಆಚಾರ್ಯ ಸೋಮಂತಡ್ಕ, ಜಯಂತ್ ನಮನ, ಆನಂದ್ ಪೂಜಾರಿ ಸೇರಿದಂತೆ ಉಜಿರೆಯ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.

ಉಜಿರೆ ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಬಿ.ಎಸ್. ಸ್ವಾಗತಿಸಿದರು. ಬೆಳ್ತಂಗಡಿಯ ಪ್ರತೀಕ್ಷಾ ಫ್ಯಾನ್ಸಿ ಸಂಸ್ಥೆಯ ಮಾಲೀಕ ಚಿದಾನಂದ ಇಡ್ಯ ಕಾರ್ಯಕ್ರಮ ನಿರೂಪಿಸಿದರು. ಶ್ರೀರಾಮ್ ತರಕಾರಿ & ಫ್ರೂಟ್ಸ್ ಮಾಲೀಕರಾದ ವಿಜಯ್ ಕುಮಾರ್ – ಸುಮಾ ಕಕುಂದರ್, ಪುತ್ರರಾದ ಹಿಮಾನ್ಶ್ ಮತ್ತು ದ್ರುತವ್ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.

Related posts

ಬೆಳ್ತಂಗಡಿಯಲ್ಲಿ ವಿಶ್ವ ಮಾದಕ ದ್ರವ್ಯ ವಿರೋಧಿ ದಿನದ ಆಚರಣೆ

Suddi Udaya

ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅರಸಿನಮಕ್ಕಿ ಆಶ್ರಯದಲ್ಲಿ ನಾಳೆ(ಡಿ.29) ಜನೌಷಧಿ ಕೇಂದ್ರ ಉದ್ಘಾಟನೆ

Suddi Udaya

ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ವಾಣಿ ಕಾಲೇಜಿನ ವಿದ್ಯಾರ್ಥಿಗಳು ಮೈಸೂರು ವಿಭಾಗೀಯ ಮಟ್ಟಕ್ಕೆ ಆಯ್ಕೆ

Suddi Udaya

ಬರೆಂಗಾಯ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಸದಸ್ಯರಿಗೆ ಶೇ. 7 ಡಿವಿಡೆಂಟ್

Suddi Udaya

ಬೆಳ್ತಂಗಡಿ: ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಸಹಾಯಧನ ವಿತರಣೆ

Suddi Udaya

ಭೀಕರ ಗಾಳಿ -ಮಳೆ: ಬೆಳ್ತಂಗಡಿ ಸೈಂಟ್ ತೆರೇಸಾ ಕಾನ್ವೆಂಟ್ ಗೆ ತೆಂಗಿನ ಮರ ಬಿದ್ದು ಹಾನಿ

Suddi Udaya
error: Content is protected !!