25.7 C
ಪುತ್ತೂರು, ಬೆಳ್ತಂಗಡಿ
August 31, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಎಸ್‌ಐಆ‌ರ್ ವೇಳಾಪಟ್ಟಿ ಪರಿಷ್ಕರಣೆ: ಆ.8ರ ತನಕ ವಿಸ್ತರಣೆ

ಬೆಳ್ತಂಗಡಿ: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವೇಳಾಪಟ್ಟಿ ಯನ್ನು ಪರಿಷ್ಕರಿಸಲಾಗಿದ್ದು, ಜು. 29ರ ಬದಲು ಗಣತಿ ನಮೂನೆಗಳನ್ನು ತುಂಬಲು ಆ. 8ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಅವರು ಜು. 14ರಂದು ಬರೆದ ಪತ್ರ ಪರಿಗಣಿಸಿ ಭಾರತ ಚುನಾವಣಾ ಆಯೋಗವು ಎಸ್‌ಐಆರ್‌ ವೇಳಾಪಟ್ಟಿ ಪರಿಷ್ಕರಿಸಿದೆ. ಅದರಂತೆ ಗಣತಿ ನಮೂನೆಗಳ ಭರ್ತಿಗೆ 10 ದಿನ, ಕರಡು ಮತದಾರರ ಪಟ್ಟಿ ಪ್ರಕಟನೆಗೆ 12 ದಿನ, ಆಕ್ಷೇಪಣೆ ಸಲ್ಲಿಸಲು 7, ನೋಟಿಸ್ ಹಂತ, ದೂರು, ಆಕ್ಷೇಪಣೆಗಳ ವಿಲೇವಾರಿಗೆ 12 ದಿನ, ಅಂತಿಮ ಮತದಾರರ ಪಟ್ಟಿ ಪ್ರಕಟನೆಗೆ 12ದಿನ ವಿಸ್ತರಣೆ ಆಗಲಿದೆ. ಈ ಹಿಂದೆ ಗಣತಿ ನಮೂನೆಗಳ ವಿತರಣೆಗೆ ಬಿಎಲ್‌ಒಗಳ ಭೇಟಿಗೆ ಜುಲೈ 29 ಕೊನೆ ದಿನವಾಗಿತ್ತು, ಈಗ ಆಗಸ್ಟ್ 8ರವರೆಗೆ ಅವಕಾಶ ಇರಲಿದೆ. ಕರಡು ಮತದಾರರ ಪಟ್ಟಿ ಪ್ರಕಟಣೆ ಆ.5ರ ಬದಲು ಆ.17ಕ್ಕೆ ಆಗಲಿದೆ. ದೂರು, ಆಕ್ಷೇಪಣೆಗಳ ಸಲ್ಲಿಕೆ ಅವಧಿಯನ್ನು ಆಗಸ್ಟ್ 8ರಿಂದ ಸೆ.9ಕ್ಕೆ ಇದ್ದದ್ದನ್ನು ಆಗಸ್ಟ್ 17ರಿಂದ ಸೆ.16 ರವರೆಗೆ ವಿಸ್ತರಿಸಲಾಗಿದೆ.

Related posts

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ಸಂಸ್ಕೃತ ಸಂಘ ಮತ್ತು ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಪದಾಧಿಕಾರಿಗಳ ಪದಪ್ರದಾನ

Suddi Udaya

ಕಾಶಿಪಟ್ಣ ಗ್ರಾ.ಪಂ. ನಲ್ಲಿ ಮಹಿಳಾ ಗ್ರಾಮ ಸಭೆ ಮತ್ತು ಉದ್ಯೋಗ ಖಾತರಿ ಯೋಜನೆಯ ಕ್ರಿಯಾ ಯೋಜನೆ ವಿಶೇಷ ಗ್ರಾಮ ಸಭೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳು ರೂರಲ್ ಐಟಿ ಕ್ವಿಜ್ ಸ್ಪರ್ಧೆಯಲ್ಲಿ ವಿಭಾಗೀಯ ಮಟ್ಟಕ್ಕೆ ಆಯ್ಕೆ

Suddi Udaya

ಉಚ್ಚಿಲದಲ್ಲಿ ಭೀಕರ ರಸ್ತೆ ಅಪಘಾತ: ಬೈಕ್ ಸವಾರ ಮಾಲಾಡಿ ನಿವಾಸಿ ರಮೇಶ್ ಹೆಗ್ಡೆ ಮೃತ್ಯು

Suddi Udaya

ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಗಡಿಪಾರು ಆದೇಶ

Suddi Udaya

ತಿಮರೋಡಿ ಮನೆಯಲ್ಲಿ ತಲವಾರು-ಬಂದೂಕು ಪತ್ತೆ ಪ್ರಕರಣ ಮಹೇಶ್ ಶೆಟ್ಟಿ ವಿಚಾರಣೆಗೆ ಹಾಜರಾಗಲು ಎರಡನೇ ನೋಟಿಸ್ ಜಾರಿ

Suddi Udaya
error: Content is protected !!