September 1, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನೈನಾಡು ಶ್ರೀ ರಾಮ ಯುವಕ ಸಂಘ ದವರು ನೀಡಿದ ಸ್ಥಳದಲ್ಲಿ ನೂತನ ಅಂಗನವಾಡಿ ಕಟ್ಟಡ ಶುಭಾರಂಭ

ಪಿಲಾತಬೆಟ್ಟು : ಶ್ರೀ ರಾಮ ಯುವಕ ಸಂಘ ದ ವತಿಯಿಂದ ನೀಡಲ್ಪಟ್ಟ ಹೊಸ ಜಾಗದಲ್ಲಿ ಬಂಟ್ವಾಳ ಶಾಸಕರ ಹಾಗೂ ಪಿಲಾತಬೆಟ್ಟು ಗ್ರಾಮ ಪಂಚಾಯತ್ ಅನುದಾನ ದಿಂದ ನಿರ್ಮಾಣ ಮಾಡಿದ ನೂತನ ಅಂಗನವಾಡಿ ಕಟ್ಟಡವು ಗಣಹೋಮ ದೊಂದಿಗೆ ಶುಭಾರಂಭಗೊಂಡಿತು.

ಕಳೆದ ಮಳೆಗಾಲದ ಸಮಯದಲ್ಲಿ ಹಳೆಯ ಅಂಗನವಾಡಿ ಕಟ್ಟಡ ವು ಶಿಥಿಲಗೊಂಡಿದ್ದು, ನಂತರದ ದಿನಗಳಲ್ಲಿ ಅಂಗನವಾಡಿಯನ್ನು ತಾತ್ಕಾಲಿಕವಾಗಿ ಹತ್ತಿರದ ಶ್ರೀ ರಾಮ ಭಜನಾ ಮಂದಿರ ದ ಸಭಾ ಭವನದಲ್ಲಿ ನಡೆಸಲಾಗುತ್ತಿತ್ತು.
ಇವತ್ತು ಬೆಳಿಗ್ಗೆ ಅಂಗನವಾಡಿ ಸಹಾಯಕಿಯರು, ನೇತ್ರಾವತಿ ಸ್ತ್ರೀ ಶಕ್ತಿ ಸಂಘದ ಸದಸ್ಯರು, ಶ್ರೀ ದುರ್ಗಾ ಸ್ತ್ರೀ ಶಕ್ತಿ ಸಂಘದ ಸದಸ್ಯರು, ಶ್ರೀ ರಾಮ ಭಜನಾ ಮಂದಿರ, ಶ್ರೀ ರಾಮ ಯುವಕ ಸಂಘ, ನಿವೇದಿತಾ ಮಾತೃ ಮಂಡಳಿ , ಪಿಲಾತಬೆಟ್ಟು ಗ್ರಾಮ ಪಂಚಾಯತ್ ಸದಸ್ಯರು ಗಳ ಸಹಯೋಗದಲ್ಲಿ ಗಣಹೋಮ ದೊಂದಿಗೆ ಶುಭಾರಂಭಗೊಂಡಿತು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಯಂ ತುಂಗಪ್ಪ ಬಂಗೇರ, ಪಂಚಾಯತ್ ಸದಸ್ಯರಾದ ಲಕ್ಷ್ಮೀ ನಾರಾಯಣ ಹೆಗ್ಡೆ, ಶ್ರೀಮತಿ ಶಾರದಾ, ಶ್ರೀಮತಿ ಹರ್ಷಿಣಿ ಪುಷ್ಪಾನಂದ, ಶ್ರೀಮತಿ ಲೀಲಾವತಿ ಕೆರೆ ಕೋಡಿ, ನೆಲ್ವಿಸ್ಟರ್ ಪಿಂಟೋ ಹಾಗೂ ಪಿ. ಪ್ರಾ. ಕೃ.ಪ. ಸ. ಸಂಘದ ನಿರ್ದೇಶಕರಾದ ಸರೋಜಾ ಧರ್ಣಪ್ಪ ಶೆಟ್ಟಿ, ಬಂಟ್ವಾಳ ತಾಲೂಕು ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ಶೋಭಾ, ಅಂಗನವಾಡಿ ಶಿಕ್ಷಕಿ ಅನಿತಾ ಕ್ರಾಸ್ತಾ ನೈನಾಡು, ಪ್ರಭಾರ ಶಿಕ್ಷಕಿ ಶ್ರೀಮತಿ ಶಾಂತಲಾ ಮೂರ್ಜೆ , ಸಹಾಯಕಿ ಶ್ರೀಮತಿ ಪದ್ಮಾವತಿ ಅಂಜಾರು, ಪಿಲಾತಬೆಟ್ಟು ಗ್ರಾಮ ಪಂಚಾಯತ್ ನ ಶ್ರೀಮತಿ ಜಯಂತಿ, ಶೀನ , ಅಂಗನವಾಡಿ ಪೋಷಕ ತಂಡದ ಅಧ್ಯಕ್ಷೆ ಶ್ರೀಮತಿ ಅನೂಷ ರಮೇಶ್ ನೈನಾಡು, ಮಾತೃ ಮಂಡಳಿ ಅಧ್ಯಕ್ಷೆ ಜಯಶೀಲಾ ಚಂದ್ರಶೇಖರ್ ಅಚ್ಚಿನಡ್ಕ , ಆಶಾ ಕಾರ್ಯಕರ್ತೆ ಪ್ರಮೀಳಾ , ಕಂಟ್ರಾಕ್ಟರ್ ಪುಷ್ಪಾನಂದ ಮೂರ್ಜೆ ಮತ್ತಿತರರು ಉಪಸ್ಥಿತರಿದ್ದರು.

ಶ್ರೀ ರಾಮ ಭಜನಾ ಮಂದಿರ ನೈನಾಡು ವತಿಯಿಂದ ಗಣಹೋಮದ ವ್ಯವಸ್ಥೆ ಮಾಡಲಾಗಿದ್ದು, ಶ್ರೀ ದುರ್ಗಾ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸದಸ್ಯರುಗಳು ಅಂಗನವಾಡಿ ಮಕ್ಕಳಿಗೆ ಸಮವಸ್ತ್ರದ ವ್ಯವಸ್ಥೆ ಮಾಡಿದ್ದರು. ನೇತ್ರಾವತಿ ಸ್ತ್ರೀ ಶಕ್ತಿ ಸಂಘದ ಸದಸ್ಯರು ಉಪಹಾರ ದ ವ್ಯವಸ್ಥೆ ಮಾಡಿದ್ದರು.

Related posts

ಮೇಲಂತಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಉಜ್ವಲ ಗ್ಯಾಸ್ ವಿತರಣೆ

Suddi Udaya

ಶಿಬಾಜೆ ಶ್ರೀ ಮೊಂಟೆತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಸದಸ್ಯರ ನೇಮಕ

Suddi Udaya

ಬೆಳಾಲು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಾಧವ ಗೌಡ ಓಣಾಜೆ

Suddi Udaya

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸತೀಶ್ ಕೆ ಬಂಗೇರ ಕಾಶಿಪಟ್ಣ, ಉಪಾಧ್ಯಕ್ಷರಾಗಿ ಶ್ರೀಪತಿ ಉಪಾಧ್ಯಯ ಆಯ್ಕೆ

Suddi Udaya

ಉಮಾಮಹೇಶ್ವರ ಭಜನಾ ಮಂಡಳಿಯ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಕಿರಿಯಾಡಿ ವೃತ್ತ ಲೋಕಾರ್ಪಣೆ

Suddi Udaya

ನೂತನ ಉಪರಾಷ್ಟ್ರಪತಿಯಾಗಿ ಎ ನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್

Suddi Udaya
error: Content is protected !!