ಬೆಳ್ತಂಗಡಿ : ಮೈಸೂರು ವಿಭಾಗದಲ್ಲಿ ಖಾಲಿವಿರುವ ಉಪ ತಹಸೀಲ್ದಾರ್ ವೃಂದದ ಹುದ್ದೆಗಳಿಗೆ ಪ್ರಥಮ ದರ್ಜೆ ಸಹಾಯಕರನ್ನು ಮುಂಭಡ್ತಿ ನೀಡಿ ಸ್ಥಳ ನಿಯುಕ್ತಿಗೊಳಿಸಿ ಸರಕಾರ ಆದೇಶಿಸಿದೆ.
ಬೆಳ್ತಂಗಡಿ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕರಾದ ಎಂ. ಮೃತ್ಯುಂಜಯ ಅವರನ್ನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಚುನಾವಣೆ ಶಾಖೆಯ ಶಿರಸ್ತೇದಾರ್ ಆಗಿ ಮುಂಭಡ್ತಿ ಮಾಡಲಾಗಿದೆ. ಕೆಪಿಎಸ್ ಸಿ ಪರಿಕ್ಷೇಯಲ್ಲಿ ತೆರ್ಗೇಡೆ ಹೊಂದಿ ಕಳೆದ 7 ವರ್ಷಗಳಿಂದ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಮೂಲತ ದಾವಣಗೆರೆ ಜಿಲ್ಲೆಯವರು.
ತಾಲೂಕು ಚುನಾವಣಾ ಶಾಖೆಯ ಪ್ರ. ದ. ಸಹಾಯಕರಾಗಿದ್ದ ಕೊರಗಪ್ಪ ಹೆಗ್ಡೆ ಅವರನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಉಪ ತಹಶೀಲ್ದಾರ್ ಆಗಿ ಬಣಕಲ್ ನಾಡಕಛೇರಿಗೆ ಸ್ಥಳ ನಿಯುಕ್ತಿಗೊಳಿಸಲಾಗಿದೆ. ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಕಳೆದ ಮೂರು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ಅವರು ಮೂಲತ ಬೆಳ್ತಂಗಡಿಯವರು.
ತಾಲೂಕು ಕಚೇರಿಯ ಪ್ರ. ದ. ಸಹಾಯಕಿ ಅನಿತಾ ಶಿಂಗಾಯಿ ಅವರನ್ನು ಸುಳ್ಯ ತಾಲೂಕಿನ ತಾಲೂಕು ಕಚೇರಿಯ ಸಾಮಾಜಿಕ ಭಧ್ರತಾ ಶಾಖೆಗೆ ಮುಂಭಡ್ತಿ ಮಾಡಲಾಗಿದೆ. ಕೆಪಿಎಸ್ ಸಿ ಪರಿಕ್ಷೇಯಲ್ಲಿ ತೆರ್ಗೇಡೆ ಹೊಂದಿ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು ಕಳೆದ 7 ವರ್ಷಗಳಿಂದ ಬೆಳ್ತಂಗಡಿಯಲ್ಲಿ ಸೇವೆ ಸಲ್ಲಿಸಿದ ಇವರು ಮೂಲತ ಬೆಳಾಗಾವಿ ಜಿಲ್ಲೆಯವರು.















