ಹತ್ಯಡ್ಕ: ತುಂಬೆತ್ತಡ್ಕ ರಾಣೆಯಾರ್ ಸಮಾಜ ಸೇವಾ ಸಂಘ ವಲಯ ಶಾಖೆ ಇದರ ವತಿಯಿಂದ ಜು.14ರಂದು ಶ್ರಮದಾನ ಹಮ್ಮಿಕೊಳ್ಳಲಾಯಿತು.

ಮುದ್ದಿಗೆಯಿಂದ ತುಂಬೆತ್ತಡ್ಕ ದವರೆಗೆ ಮಾರ್ಗದ ಹೊಂಡಗಳಿಗೆ ಚರಳು ಹಾಕಿ ವಾಹನಗಳು ಸುಗಮ ಸಂಚಾರಿಸುವಂತೆ ಮಾಡಲಾಯಿತು. ರಸ್ತೆ ಬದಿ ಕಳೆ ಗಿಡಗಳನ್ನು ತೆಗೆಯಲಾಯಿತು. ಶ್ರಮದಾನದಲ್ಲಿ ಸಂಘದ ಎಲ್ಲಾ ಸದಸ್ಯರು ಭಾಗವಹಿಸಿದರು.















