ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಶಾಲಾ ಸುರಕ್ಷತೆ ಮತ್ತು ವಿಪತ್ತು ನಿರ್ವಹಣೆ ಅರಿವು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮುಖ್ಯಅತಿಥಿಗಳಾಗಿ ಶಾಂತಿಲಾಲ್ ಜಾತಿಯಾ, ಉಸ್ತುವಾರಿ ನಿರೀಕ್ಷಕರು, ವಿಪತ್ತು ನಿರ್ವಹಣೆ, ದಕ್ಷಿಣ ಕನ್ನಡ, ಸುಭಾಷ್ ಶಿಂಧೆ, ಸಬ್ ಇನ್ಸ್ಪೆಕ್ಟರ್, 10ನೇ ಬೆಟಾಲಿಯನ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಬೆಂಗಳೂರು, ಪಾಟೀಲ್ ನಿವೇಶ್ , ಬಾಲಕೃಷ್ಣ, ರಾಘೆ ರಾಮಕೃಷ್ಣ ರಕ್ಷಣಾ ಸಿಬ್ಬಂದಿಗಳು ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್ (NDRF), 10ನೇ ಬೆಟಾಲಿಯನ್ ತಂಡ, ಬೆಂಗಳೂರು (ಕರ್ನಾಟಕ) ಇವರು ಆಗಮಿಸಿದ್ದರು.

ಸುಭಾಷ್ ಶಿಂಧೆ ಮಾತನಾಡಿ ವಿಪತ್ತು ನಿರ್ವಹಣೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಪ್ರಾತ್ಯಕ್ಷಿಕೆಯ ಮುಖಾಂತರ ನೀಡಿದರು. ಬಳಿಕ ಮಾತನಾಡಿದ ಶಾಂತಿಲಾಲ್ ಜಾಟಿಯಾ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆಯ ಕುರಿತು ಮಾಹಿತಿಯನ್ನು ನೀಡಿದರು. ಜೊತೆಗೆ ವಿದ್ಯಾರ್ಥಿಗಳಿಗೆ ಓದಿನ ಮಹತ್ವ ಹಾಗೂ ಸಾಧನೆಯ ಹಾದಿ ಅದಕ್ಕೆ ಪಡಬೇಕಾದ ಕಷ್ಟ ಇತ್ಯಾದಿಗಳನ್ನು ಬಹಳ ಮಾರ್ಮಿಕವಾಗಿ ವಿವರಿಸಿದರು. ಕೆಲ ವಿದ್ಯಾರ್ಥಿಗಳು ತಮಗೆ ಬಂದಂತ ಸಂದೇಹಗಳನ್ನು ಪ್ರಶ್ನಿಸುವ ಮುಖಾಂತರ ನಿವಾರಿಸಿಕೊಂಡರು. ಶಾಲಾ ಸಹ ಶಿಕ್ಷಕಿ ಶ್ರೀಮತಿ ಕಾವ್ಯ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಸ್ವಾಗತಿಸಿದರು. ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.















